Posts

Showing posts from August, 2023

ಓದಿನ ಸುಖ "ನಿರ್ಮಾಲ್ಯ"

Image
  ಪುಸ್ತಕದ ಹೆಸರು : ನಿರ್ಮಾಲ್ಯ       ಲೇಖಕರು : ಚಂದ್ರಶೇಖರ ಭಂಡಾರಿ               ಈ ಪುಸ್ತಕ ನನಗೆ ಲಭಿಸಿದ್ದು ಅತ್ಯಂತ ಆಕಸ್ಮಿಕವಾಗಿ. ಐದು ವರ್ಷಗಳ ಹಿಂದೆ ನನ್ನ ಮದುವೆ ನಿಶ್ಚಯವಾದಾಗ, ಆಮಂತ್ರಣ ಪತ್ರಿಕೆಯನ್ನು ಕೊಡಲು ನಾನು ಕಲಿತ ಗುರುಕುಲಕ್ಕೆ ಹೋದಾಗ, ಅದೇ ದಿನ 'ನಿರ್ಮಾಲ್ಯ' ದ ಬಿಡುಗಡೆ ಸಮಾರಂಭ ಮಂಗಳೂರಿನ ಸಂಘನಿಕೇತನದಲ್ಲಿತ್ತು. ಹೇಗೂ ನಾನು ಕೂಡ ಮಂಗಳೂರಿಗೆ ಹಿಂತಿರುಗುವವಳಿದ್ದ ಕಾರಣ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಆಗ ನನಗೆ ಈ ಪುಸ್ತಕವನ್ನು ಪ್ರೀತಿಯಿಂದ ಶ್ರೀಮತಿ ಮಾತೃಶ್ರೀ ಉಡುಗೊರೆ ರೂಪದಲ್ಲಿ ನೀಡಿದ್ದರು. ಮೊದಲ ಬಾರಿಗೆ ಉಡುಗೊರೆ ರೂಪದಲ್ಲಿ ಸಿಕ್ಕಿದ ಪುಸ್ತಕ ಇದಾಗಿತ್ತು.                           ಗುರುಕುಲಕ್ಕೆ ಕೃಷ್ಣಪ್ಪ ತಾತ ಬರುತ್ತಾರೆ ಎಂದು ಗೊತ್ತಾದಾಗ ನಮ್ಮ ಮನದಲ್ಲಿ ಖುಷಿಯ ಸಂಚಾರ. ಮನೆಯಲ್ಲಿರುವ ಹಿರಿಯಜ್ಜನಂತೆ ನಮಗೆಲ್ಲಾ ಕಥೆಯನ್ನು ಹೇಳಿ ಮನೆಯ ನೆನಪೂ ಬಾರದಂತೆ ನಡೆದುಕೊಳ್ಳುತ್ತಿದ್ದರು. ಪ್ರತೀ ಬಾರಿ ಗುರುಕುಲಕ್ಕೆ ಬರುವ ಮೊದಲು ನಮಗೆ ಒಂದೊಂದು ಚಟುವಟಿಕೆಗಳನ್ನು ನೀಡುತ್ತಿದ್ದರು. ಒಮ್ಮೆ ಮೂಲಾರಾಮಾಯಣದ 100 ಶ್ಲೋಕಗಳ ಕಂಠಪಾಠ, ಇನ್ನೊಮ್ಮೆ ಎಲ್ಲಾ ಭಾಷೆಗಳ ಒಂದೊಂದು ಪದ್ಯ - ...

ಮೊದಲ ದಿನ ಮೌನ

Image
        ಮೊದಲ ಬಾರಿ ಎಳೆ ಮಗಳನ್ನು ಎತ್ತಿದಾಗ ಮನದಲ್ಲಿ ಮೂಡಿದ ಪ್ರಶ್ನೆ ಇವಳು ಹೇಗೆ ದೊಡ್ಡವಳಾಗುತ್ತಾಳಪ್ಪ? ಇವಳನ್ನು ಬೆಳೆಸುವುದು ನನ್ನಿಂದ ಸಾಧ್ಯವೇ? ಎಂದು. ಸಮಯ ಉರುಳಿತು. ಸದಾ ನನಗೇ ಅಂಟಿಕೊಂಡಿರುತ್ತಿದ್ದ ಮಗಳು ಯಾವಾಗ ಶಾಲೆಗೆ ಹೋಗುತ್ತಾಳೊ ಎಂದು ಅನಿಸಲು ಶುರುವಾಯಿತು. ಮಗಳಿಗೆ ಮೂರು ವರ್ಷವಾದಾಗ ಅವಳನ್ನು ಶಾಲೆಗೆ ಸೇರಿಸಲು ಹತ್ತಿರದ ಶಾಲೆಗಳನ್ನು ವಿಚಾರಿಸಿದೆವು. ಒಂದು ಶಾಲೆಯವರಂತು ಮಗಳಿಗೆ ಮೂರು ವರ್ಷವಾಗಿಯೂ ಇನ್ನೂ ಯಾವದೇ ಶಾಲೆಗೆ ಸೇರಿಸದಿದ್ದ ನಮ್ಮನ್ನು ಶಿಲಾಯುಗದ ಪಾಲಕರಂತೆ ಕಂಡರು. ಯಾಕಿಷ್ಟು ತಡ ಮಾಡಿದಿರಿ? ಅಜ್ಜ ಅಜ್ಜಿಯರ ಪ್ರೀತಿಯನ್ನು ಸವಿದ ಮಕ್ಕಳು ಶಾಲೆಗೆ ಹೊಂದಿಕೊಳ್ಳುವುದು ಕಷ್ಟ ಎಂದು ಹೇಳಿದಾಗ ನಾವು ಸಹ ಧೈರ್ಯಗುಂದಿದ್ದು ಸುಳ್ಳಲ್ಲ. ಒಂದು ಶಾಲೆಯ ವಾತಾವರಣ ಹಿಡಿಸದಿದ್ದರೆ, ಇನ್ನೊಂದು ಶಾಲೆಯನ್ನು ದುಬಾರಿ ಶುಲ್ಕದ ಕಾರಣಕ್ಕೆ ಬಿಟ್ಟೆವು. ಮತ್ತೊಂದು ಶಾಲೆಯಲ್ಲಿ ವಿದ್ಯಾರ್ಥಿ - ಶಿಕ್ಷಕರ ಸಂಖ್ಯಾ ಅನುಪಾತ ನಮಗೆ ಹೊಂದುವಂತೆ ಇಲ್ಲದ ಕಾರಣ ಬಿಟ್ಟೆವು. ಹೀಗೆ ಎಲ್ಲವನ್ನೂ ಗಮದಲ್ಲಿಟ್ಟುಕೊಂಡು ಮನೆಗೆ ಹತ್ತಿರವಿದ್ದ ಶಾಲೆಗೆ ಅಡ್ಮಿಷನ್ ಮಾಡಿಸಿದೆವು.           ಅಡ್ಮಿಷನ್ ಮಾಡಿದ ಮೇಲೆ ಮಗಳಿಗೆ ಶಾಲೆಗೆ ಹೋಗುವುದರ ಬಗ್ಗೆ ಹೇಳತೊಡಗಿದೆ. ಆದರೆ ಅದಕ್ಕಿಂತ ಮೊದಲೇ ಅವಳು ಕಾರ್ಟೂನ್ ನೋಡಿ ಶಾಲೆಯ ಬಗ್ಗೆ ಒಳ್ಳೆಯ ಕನಸುಗಳನ್ನೇ ಕಂಡಿದ್ದಳು....