Posts

Showing posts from April, 2024

ಓದಿನ ಸುಖ "ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು"

Image
ಪುಸ್ತಕದ ಹೆಸರು: ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು ಲೇಖಕರು: ನೇಮಿಚಂದ್ರ            ನೇಮಿಚಂದ್ರರ 'ಬದುಕು ಬದಲಿಸಬಹುದು' ಪುಸ್ತಕವನ್ನು ಓದಿದವರಿಗೆ ಲೇಖಕಿಯ ಶೈಲಿ ಸುಪರಿಚಿತವೇ. ಬದುಕಿನಲ್ಲಿ ಎಷ್ಟೇ ಕಷ್ಟವಿರಲಿ ಆತ್ಮವಿಶ್ವಾಸ, ಸಕಾರಾತ್ಮಕ ಗುಣವನ್ನು ಬಿತ್ತುವುದು ನೇಮಿಚಂದ್ರರ ಬರಹದ ಉದ್ದೇಶ. 'ಬದುಕು ಬದಲಿಸಬಹುದು' ಪುಸ್ತಕದಲ್ಲಿ ಹಲವು ಘಟನೆಗಳನ್ನು ಉಲ್ಲೇಖಿಸುತ್ತಾ ಆ ಘಟನೆ ಯಾವ ಕಥೆಗೆ ಪ್ರೇರಣೆಯಾಯಿತೆಂದು ಕೂಡ ತಿಳಿಸಿದ್ದಾರೆ. ಹಾಗಾಗಿ ಇಲ್ಲಿದ್ದ ಹೆಚ್ಚಿನ ಕಥೆಗಳ 'ಸತ್ಯ ಕಥೆಗಳು' ಗೊತ್ತಿದ್ದರಿಂದ ನಿರೀಕ್ಷಿತ ಅಂತ್ಯವೆಂದೇ ಹೇಳಬಹುದು.            ಆಕಸ್ಮಿಕವಾಗಿ ಅಪಘಾತದಲ್ಲಿ ನೆನಪು ಕಳೆದುಕೊಂಡ ಪತ್ನಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಪತಿಯ ಹೋರಾಟ, ಜೊತೆ ಜೊತೆಗೆ ಈ ಪರಿಸ್ಥಿತಿಯನ್ನು ಅರಿಯದೆ ತನ್ನ ತಂದೆ ತಾಯಿಯ ಗೊಣಗಾಟವನ್ನು ಧಿಕ್ಕರಿಸಿ ಬದುಕುವ ಹೋರಾಟದ ಕಥೆಯನ್ನು 'ಮರಳಿ ಬದುಕಿಗೆ ಈ ಪಯಣ'ದಲ್ಲಿ ಓದಬಹುದು.                    ಕಾನ್ಸರ್ ಬಂದು ಮಾನಸಿಕವಾಗಿ ಕುಗ್ಗಿ, ಸಾವೊಂದೆ ಸತ್ಯ ಎಂಬಂತೆ ತಿಳಿದ ಸೂಕ್ಷ್ಮ ಮನಸ್ಥಿತಿಯ ಶಶಿ ತನ್ನ ಜೀವನದಲ್ಲಿ ಕಳೆದುಕೊಂಡ ಚೈತನ್ಯವನ್ನು ಮರಳಿ ಪಡೆಯುವ ಕಥೆ 'ಬದುಕು ನಿನ್ನಲ್ಲೆಂಥಾ ಮುನಿಸು'. ತನ್ನ ಗಂಡ ಇನ್ನೊಬ್ಬ ಹೆಂಗ...

ಓದಿನ ಸುಖ - "ಮನ್ವಂತರ"

Image
ಪುಸ್ತಕದ ಹೆಸರು : ಮನ್ವಂತರ ಲೇಖಕರು : ವಸುಮತಿ ಉಡುಪ                 ವಸುಮತಿ ಉಡುಪರ 'ಹೆಜ್ಜಾಲ' ಕೃತಿ ಓದಿದ ಮೇಲೆ ಗ್ರಂಥಾಲಯದಲ್ಲಿ ಕಂಡು ಓದಿದ ಪುಸ್ತಕ 'ಮನ್ವಂತರ'. ಲೇಖಕಿಯು ಹೇಳಿದಂತೆ ಕಾದಂಬರಿಯು 80ರ ದಶಕದ ಮಲೆನಾಡಿನ ಕೃಷಿ ಕುಟುಂಬದ ಕಥೆ. ತಂದೆ, ತಾಯಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿರುವ 5 ಮಂದಿಯ ಸಂಸಾರ. ಮನೆಯ ಯಜಮಾನನ ಅಕಾಲಿಕ ಮರಣ ಎಲ್ಲರನ್ನೂ ದಿಕ್ಕೆಡುವಂತೆ ಮಾಡುತ್ತದೆ. ಮಗ ಇನ್ನೂ ಚಿಕ್ಕವನಾದ್ದರಿಂದ, ದೊಡ್ಡಮಗಳು ಗೋದಾವರಿ ಹಾಗೂ ಅವಳ ಗಂಡನ ಸಹಕಾರದಿಂದ ಕೃಷಿ ಕೆಲಸಗಳು ನಡೆಯುತ್ತಿರುತ್ತವೆ. ವರ್ಷಗಳು ಕಳೆದಂತೆ ಕಥಾನಾಯಕಿ ಕಾವೇರಿಗೆ ಮದುವೆಯ ವಯಸ್ಸಾಗುತ್ತದೆ. ಮನೆಯ ಪರಿಸ್ಥಿತಿಗೆ ಬಲಿಪಶುವಾದ ಕಾವೇರಿ ತನ್ನ ಮದುವೆಯ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲೂ ಸಹ ಆಗದೇ ಅಕ್ಕ ಗೋದಾವರಿ ನೋಡಿದ, ಮನೆ ಅಳಿಯನಾಗಿ ಬಂದ ಗಂಡು ಜನಾರ್ದನನ್ನು ಮದುವೆಯಾಗುತ್ತಾಳೆ. ವಯಸ್ಸಿಗೆ ಸಹಜವಾಗಿ ತನ್ನದೇ ಸ್ವಂತ ಮನೆ, ಸಂಸ್ಕಾರವಂತ ಗಂಡನನ್ನು ಅಪೇಕ್ಷಿಸಿದ ಕಾವೇರಿಗೆ ಮುಂದೆ ಒಂದೊಂದಾಗಿ ಗಂಡನ ಅವಗುಣಗಳು ತಿಳಿಯತೊಡಗುತ್ತವೆ. ಇಡೀ ಮನೆಗಾಗಿ, ಅಮ್ಮನಿಗಾಗಿ, ತಮ್ಮನಿಗಾಗಿ ಕಾವೇರಿ ಮಾಡಿದ ತ್ಯಾಗವು ಗಂಡನ ದುರ್ಗುಣಗಳ ಮುಂದೆ ಮರೆಯಾಗತೊಡಗುತ್ತದೆ. ಇದರ ಜೊತೆಗೇ ರಜೆಯಲ್ಲಿ ಪೇಟೆಯಿಂದ ಬರುತ್ತಿದ್ದ ಅಕ್ಕ ಭಾವ ಹಾಗೂ ಮಕ್ಕಳಿಗೆ ಮರ್ಯಾದೆ, ಉಪಚಾರಗಳು ಸಿಗ...