Posts

Showing posts from December, 2023

ಓದಿನ ಸುಖ - "ಯಾವ ನಾಳೆಯೂ ನಮ್ಮದಲ್ಲ"

Image
ಪುಸ್ತಕದ ಹೆಸರು : ಯಾವ ನಾಳೆಯೂ ನಮ್ಮದಲ್ಲ ಲೇಖಕರು : ಉಷಾ.ಪಿ.ರೈ             ಕನ್ನಡದಲ್ಲಿ ಹಲವು ಕಥೆ-ಕಾದಂಬರಿಗಳನ್ನು ಬರೆದ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದ ಉಷಾ.ಪಿ.ರೈ ಅವರು ಬರೆದ ತಮ್ಮ ಆತ್ಮಕಥೆಯೇ 'ಯಾವ ನಾಳೆಯೂ ನಮ್ಮದಲ್ಲ'.           ಪುಸ್ತಕದ ಆರಂಭದಲ್ಲಿ ತಮ್ಮ ಬಾಲ್ಯದ ಜೀವನವನ್ನು ನೆನಪಿಸಿಕೊಂಡಿದ್ದಾರೆ ಲೇಖಕಿ. ತಮ್ಮ ಬಾಲ್ಯವನ್ನು ಸಮೃದ್ಧವಾಗಿಸಿದ್ದ ಉಡುಪಿಯ ಪರಿಸರದ ಅನುಭವದ ಜೊತೆಗೆ ಇಂದಿನ ಉಡುಪಿಯ ಪರಿಸರದ ಬಗ್ಗೆ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಮುಂದೆ ತಮ್ಮ ತಂದೆ ತಾಯಿಯ ಬಗ್ಗೆ ಅಭಿಮಾನದ ಮಾತನ್ನು ಹೇಳಿದ್ದಾರೆ ಲೇಖಕಿ. ತಂದೆ ಹೊನ್ನಯ್ಯ ಶೆಟ್ಟರು ನವಯುಗ ಪತ್ರಿಕೆಯ ಪ್ರವರ್ತಕರು ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿದವರು. ಪತ್ರಿಕೆಯನ್ನು ಹೊರತರಲು ತಂದೆ ಪಡುತ್ತಿದ್ದ ಕಷ್ಟ, ತಂದೆಯ ಎಲ್ಲಾ ಕೆಲಸಗಳನ್ನು ತಾಯಿ ಬೆಂಬಲಿಸುತ್ತಿದ್ದ ರೀತಿ, ಅಂದಿನ ಬಂಟರ ಜೀವನ ಪದ್ಧತಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಡಿದ್ದಾರೆ ಲೇಖಕಿ.             ಮುಂದೆ ವೈವಾಹಿಕ ಜೀವನ, ಬ್ಯಾಂಕ್ ಉದ್ಯೋಗ, ಅದರ ಜೊತೆ ಜೊತೆಗೆ ಹವ್ಯಾಸವಾದ ಬರವಣಿಗೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗಿನ ಅನುಭವಗಳು, ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅನುಭವಗಳು, ಸಾಹಿತಿಗಳ ಜೊತೆ ಒಡನಾಟ ಎಲ್ಲವನ್ನೂ ದಾಖಲ...

ಓದಿನ ಸುಖ - ಮನಿ ಮನಿ ಎಕಾನಮಿ

Image
         ಪುಸ್ತಕದ ಹೆಸರು: ಮನಿ ಮನಿ ಎಕಾನಮಿ ಲೇಖಕರು : ರಂಗಸ್ವಾಮಿ ಮೂಕನಹಳ್ಳಿ                ಹಣವೊಂದಿದ್ದರೆ ಏನನ್ನು ಬೇಕಾದರೂ ಮಾಡಲು ಸಾಧ್ಯ ಎಂಬುದು ನಮ್ಮೆಲ್ಲರ ಮನಸ್ಥಿತಿ. ಅದಕ್ಕೇ ತಾನೆ "ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ" ಎಂದು ಹಿರಿಯರು ಹೇಳಿದ್ದು. ಆದರೆ ಹಣವೊಂದು ಮಾತ್ರವಿದ್ದರೆ ಸಾಲದು. ಹಣವನ್ನು ಹೇಗೆ ಉಳಿತಾಯ ಹಾಗೂ ಹೂಡಿಕೆ ಮಾಡಬೇಕು? ವಿತ್ತ ಜಗತ್ತಿನ ಆಗು ಹೋಗುಗಳು, ಬೇರೆ ಬೇರೆ ದೇಶಗಳ ಆರ್ಥಿಕ ಪರಿಸ್ಥಿತಿ ಎಲ್ಲದರ ಬಗ್ಗೆಯೂ ವಿಸ್ತಾರವಾಗಿ, ಆದರೆ ಅತ್ಯಂತ ಸರಳವಾಗಿ ಎಲ್ಲರಿಗೂ, ವಾಣಿಜ್ಯ ವಿಭಾಗದ ಬಗ್ಗೆ ಏನೂ ಗೊತ್ತಿಲ್ಲದವರೂ ಸಹ ಸುಲಭವಾಗಿ ಅರ್ಥೈಸುವಂತೆ ಒಟ್ಟು ೨೫ ಲೇಖನಗಳಲ್ಲಿ ಬರೆದಿದ್ದಾರೆ ಲೇಖಕರು.            'ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆಗಳು' ಎಂಬ ಬರಹದಲ್ಲಿ ವಯಸ್ಸಾದವರಿಗೆ, ಕೆಲಸದಿಂದ ನಿವೃತ್ತರಾದವರಿಗೆ ಹೆಚ್ಚು ಅಪಾಯವಿಲ್ಲದಿರುವ ಹಣ ಉಳಿತಾಯದ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ. 'ಪೂರ್ಣ ಡಿಜಿಟಲೀಕರಣವೆಂದರೆ ಮತ್ತೇನಿಲ್ಲ ಹೆಚ್ಚಿನ ನಿಯಂತ್ರಣ' ಎಂಬ ಬರಹದಲ್ಲಿ ಡಿಜಿಟಲ್ ಪಾವತಿಯ ಮೂಲಕ ನಮ್ಮ ಇಷ್ಟಾನಿಷ್ಟಗಳ ಪ್ರೊಫೈಲ್ ಸಿದ್ಧವಾಗಿ ವರ್ಷದ ನಂತರ ನಾವು ಖರೀದಿಸುವ ಕಾರ್, ಸ್ಕೂಟರ್ ಮುಂತಾದುವುಗಳನ್ನು ನಾವು ಕೊಳ್ಳುವಂತೆ ಹೇಗೆ ಪ್ರೇರೇಪಿಸಲಾಗುತ್ತದೆ ಎ...

ಓದಿನ ಸುಖ - ಹಿಂದಿನ ನಿಲ್ದಾಣ

Image
              ಪುಸ್ತಕದ ಹೆಸರು : ಹಿಂದಿನ ನಿಲ್ದಾಣ ಲೇಖಕರು : ಶುಭಶ್ರೀ ಭಟ್ಟ             ಮನುಷ್ಯ ಯಾವಾಗಲೂ ಮುಂದಿನ ನಿಲ್ದಾಣದ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಅಂದರೆ ಸದಾ ಭವಿಷ್ಯದ ಬಗ್ಗೆ ಯೋಚನೆ ಹಾಗೂ ಯೋಜನೆ ರೂಪಿಸಿಕೊಳ್ಳುತ್ತಿರುತ್ತಾನೆ. ಅದೇ ಅವನನ್ನು ವರ್ತಮಾನದಲ್ಲಿ ಜೀವಂತವಾಗಿರಿಸುವುದು ಎನ್ನುವುದು ನನ್ನ ನಂಬಿಕೆ. ಆದರೆ ಈ ಪುಸ್ತಕದಲ್ಲಿ ಲೇಖಕಿ ತಮ್ಮ ಬಾಲ್ಯದ ಭಾವ ಜಗತ್ತನ್ನು ಪುಟ್ಟ ಪುಟ್ಟ ಲೇಖನಗಳ ಮೂಲಕ ಅಕ್ಷರ ರೂಪಕ್ಕಿಳಿಸಿದ್ದಾರೆ. ಇಲ್ಲಿರುವ ಎಲ್ಲಾ ಬರಹಗಳು ಲೇಖಕಿಯ ಅನುಭವಗಳು. ಮುನ್ನುಡಿಯಲ್ಲಿ ಹಿರಿಯರಾದ ಸುಬ್ರಾಯ ಚೊಕ್ಕಾಡಿಯವರು ಹೇಳಿದಂತೆ "ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು" ಎನ್ನುವಂತೆ ಅಂದು ಅನುಭವಿಸಿದ ದುಃಖವು ಇಂದು ನಗೆಯನ್ನು ಉಕ್ಕಿಸಿದರೆ, ಅಂದಿನ ಖುಷಿಯ ಘಟನೆಗಳು ಇಂದು ಕಣ್ಣನ್ನು ತೇವಗೊಳಿಸುತ್ತವೆ. ಅಂತಹ ಹಲವಾರು ಉದಾಹರಣೆಗಳು ಈ ಪುಸ್ತಕದಲ್ಲಿ ಸಿಗುತ್ತವೆ.              'ಪರೀಕ್ಷಾಗಾಲದಲ್ಲಿ ಜನಿಸುವ ಕಥೆಗಳು ' ಎಂಬ ಬರಹದಲ್ಲಿ ಎಲ್ಲಾ ಕಾಲದ ಮಕ್ಕಳ ತಲೆನೋವಾಗಿರುವ, ಪರೀಕ್ಷೆಯ ಓದುವ ಸಮಯದಲ್ಲಿ ಮಾಡುವ ಕಿತಾಪತಿಗಳನ್ನು ಹೇಳುತ್ತಾ, ಪ್ರಕೃತಿಯ ಮಡಿಲಲ್ಲಿ ಓದುತ್ತಾ, ಪ್ರಕೃತಿಯ ಅತ್ಯಂತ ಸೂಕ್ಷ್ಮ ವಿಷಯಗಳನ್ನೂ ಗಮನಿಸುತ್ತಾ ಅದನ್ನೆಲ್ಲಾ ಅಕ್...

ಓದಿನ ಸುಖ - "ಪುರುಷೋತ್ತಮ"

Image
ಪುಸ್ತಕದ ಹೆಸರು: ಪುರುಷೋತ್ತಮ ಲೇಖಕರು : ಯಶವಂತ ಚಿತ್ತಾಲ         ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಲೆಕ್ಚರರ್ ಒಬ್ಬರು ಯಶವಂತ ಚಿತ್ತಾಲರ ಬಗ್ಗೆ ಹೇಳಿದ್ದರು. ಅವರ ಯಾವುದೇ ಪುಸ್ತಕಗಳನ್ನು ಓದಿರದ ನಾನು ಮೊದಲು ಶಿಕಾರಿ ಕೈಗೆತ್ತಿಗೊಂಡಿದ್ದೆ. ಆದರೆ ಆಗ ಅದು ಎಷ್ಟು ಅರ್ಥವಾಗಿತ್ತೋ ನನಗೇ ಗೊತ್ತಿಲ್ಲ. ಕೆಲವು ಲೇಖಕರ ಪುಸ್ತಕಗಳನ್ನು ಅಷ್ಟು ಸುಲಭದಲ್ಲಿ ಓದಿ ದಕ್ಕಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ನಮ್ಮ ಜೀವನದ ದೃಷ್ಟಿ, ಅನುಭವಗಳು, ಯೋಚನಾ ಶೈಲಿ ಎಲ್ಲವೂ ಕೂಡ ಕಾರಣವಾಗಿರುತ್ತವೆ. ಅಂತಹ ಲೇಖಕರ ಸಾಲಿಗೆ ಯಶವಂತ ಚಿತ್ತಾಲರು ಸೇರುತ್ತಾರೆ.             ಮೊನ್ನೆ ಮನೆ ಹತ್ತಿರದ ಗ್ರಂಥಾಲಯದಲ್ಲಿ "ಪುರುಷೋತ್ತಮ" ಕಂಡಾಗ ಸ್ವಲ್ಪ ಅಳುಕಿನಿಂದಲೇ ಕೈಗೆತ್ತಿಕೊಂಡೆ. ಅದಕ್ಕೆ ಕಾರಣ ಚಿತ್ತಾಲರ ಶೈಲಿ ಹಾಗೂ ಕಾದಂಬರಿಯ ಹರವು. ಮನುಷ್ಯನ ಮಾನಸಿಕ ಹೊಯ್ದಾಟವನ್ನು ದಟ್ಟವಾಗಿ ಚಿತ್ರಿಸಿ, ಬಗೆದಷ್ಟೂ ಆಳವಾದ, ಸಂಕೀರ್ಣವಾದ ಮನುಷ್ಯನ ಮಾನಸಿಕ ಸ್ಥಿತಿಯನ್ನು ಕಾದಂಬರಿಯುದ್ದಕ್ಕೂ ಆವರಿಸಿ ವಿಷಾದವೊಂದೇ ಸ್ಥಾಯೀ ಭಾವವೇನೋ ಎಂಬಂತೆ ಚಿತ್ರಿಸಿದ ಕಾದಂಬರಿ "ಪುರುಷೋತ್ತಮ".             ಕೆಮಿಕಲ್ ಎಂಜಿನಿಯರಿಂಗ್ ಮುಗಿಸಿ ಮುಂಬೈಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಪುರುಷೋತ್ತಮ, ತನ್ನ ಮುತ್ತಜ್ಜ ಕಟ್ಟಿಸಿರುವ ಮನೆಯ ಮೇಲೆ...