Posts

ದೇವತೆಗಳ ದ್ವೀಪದಲ್ಲಿ ಭಾಗ -1

Image
               ವಿದೇಶ ಪ್ರವಾಸವೆನ್ನುವುದು ನಮ್ಮ ತಲೆಮಾರಿನ ಹೆಚ್ಚಿನವರ ಕನಸು. ನಮ್ಮ ನಾಳೆಗಳಿಗಾಗಿ ತಮ್ಮ ನಿನ್ನೆಗಳನ್ನು ತ್ಯಾಗ ಮಾಡಿದ ನಮ್ಮ ಪಾಲಕರಿಗೆ, ನಾವು ಕಾಣುತ್ತಿರುವ, ಬದಲಾಗುತ್ತಿರುವ ಜಗತ್ತನ್ನು ತೋರಿಸುವುದು ಸಹ ನಮ್ಮ ಕನಸಾಗಿತ್ತು. ಹೀಗಾಗಿ ನಾವು ನಮ್ಮ ಮೊದಲ ವಿದೇಶ ಪ್ರವಾಸವನ್ನು ಯೋಜಿಸಿದ್ದೆವು. ನೈಸರ್ಗಿಕವಾಗಿ ರಮಣೀಯವಾದ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹಾಗೂ ನಮ್ಮ ಬಜೆಟ್ ನ ಪರಿಮಿತಿಯಲ್ಲಿ ಬರುವ ದೇಶವನ್ನು ಪ್ರವಾಸಕ್ಕಾಗಿ ಆಯ್ದುಕೊಳ್ಳಲು ನಿರ್ಧರಿಸಿದಾಗ ನಮಗೆ ಇಂಡೋನೇಷಿಯಾದ ದ್ವೀಪ 'ಬಾಲಿ' ಒಳ್ಳೆಯ ಆಯ್ಕೆ ಎಂದು ಅನಿಸಿತು. ಹೀಗಾಗಿ ನಮ್ಮ ಮೊದಲ ವಿದೇಶ ಪ್ರವಾಸಕ್ಕಾಗಿ ಬಾಲಿಯನ್ನು ಆಯ್ದುಕೊಂಡೆವು. ಬಾಲಿಗೆ ಹೋಗಬೇಕೆಂದು ನಿರ್ಧರಿಸಿದ ಮೇಲೆ ಮೊಬೈಲ್ ತುಂಬಾ ಬಾಲಿಯ ವಿಷಯಗಳು!! ಯಾವುದೇ ಪ್ಯಾಕೇಜ್ ನ ಸಹಾಯವಿಲ್ಲದೇ ಕೇವಲ ಯೂಟ್ಯೂಬ್, ಚಾಟ್ ಜಿಪಿಟಿ ಹಾಗೂ wanderlog ಆಪ್ ಸಹಾಯದಿಂದ, ನಾವು ನೋಡಬೇಕಾದ ಸ್ಥಳಗಳ ಪಟ್ಟಿ ಹಾಗೂ ಉಳಿದುಕೊಳ್ಳುವ ಹೊಟೆಲ್ ಗಳ ಪಟ್ಟಿಯನ್ನು ತಯಾರಿಸಿದೆವು. ಇನ್ನುಳಿದಂತೆ  ಪ್ರಯಾಣಿಸಬೇಕಾದ ವಿಮಾನಗಳ ಪಟ್ಟಿ, ಬ್ಯಾಗ್ ಪ್ಯಾಕಿಂಗ್ ಹೀಗೆ ಒಂದೊಂದೇ ಸಿದ್ಧತೆಗಳು ನಡೆದಂತೆ ಹೋಗುವ ಕಾತರವೂ ಸಹ ಹೆಚ್ಚಾಯಿತು. ಅಂತೂ ಹೊರಡುವ ದಿನ ಬಂದೇ ಬಿಟ್ಟಿತು!               ಏಪ್ರಿಲ್ 13 ರ ...

ಪುಸ್ತಕಗಳ ಜೊತೆ ನನ್ನ ಅನುಬಂಧ

  "ದೇಶ ಸುತ್ತು ಕೋಶ ಓದು" ಎಂಬುದು ಹಿರಿಯರು ಹೇಳಿದ ಮಾತು. ಇಂದು ಜ್ಞಾನವನ್ನು ಸಂಪಾದಿಸಲು ಹಲವಾರು ಮಾಧ್ಯಮಗಳಿದ್ದರೂ ಸಹ ಪುಸ್ತಕಗಳಷ್ಟು ಸಶಕ್ತ ಮಾಧ್ಯಮವು ಬೇರೊಂದಿಲ್ಲ. ಏಪ್ರಿಲ್ ತಿಂಗಳ 23 ರಂದು 'ವಿಶ್ವ ಪುಸ್ತಕ ದಿನ'ವನ್ನಾಗಿ ಆಚರಿಸುತ್ತಾರೆ. ಆ ಪ್ರಯುಕ್ತ ಪುಸ್ತಕದ ಜೊತೆಗಿನ ನನ್ನ ಅನುಬಂಧವನ್ನು ಹಂಚಿಕೊಳ್ಳುತ್ತೇನೆ.    ನಾನು ಚಿಕ್ಕವಳಿದ್ದಾಗ, ಊರಿನಲ್ಲಿರುವ ಗ್ರಂಥಾಲಯದಲ್ಲಿ ಅಪ್ಪ ಸದಸ್ಯತ್ವವನ್ನು ಪಡೆದು ಮನೆಯಲ್ಲಿ ತಮಗೆ ಓದಲು ತರುತ್ತಿದ್ದ ಪುಸ್ತಕಗಳಲ್ಲಿ ಒಂದನ್ನು ನನಗೋಸ್ಕರ ತರುತ್ತಿದ್ದರು. ನಾನು ಓದಿದ ಮೊದಲ ಪುಸ್ತಕ 'ನನ್ನ ಗೋಪಾಲ' ಎನ್ನುವ ಚಿತ್ರಕಥಾ ಪುಸ್ತಕ. ಮುಂದೆ ಪಂಚತಂತ್ರ ಕಥೆಗಳು, ಅಕ್ಬರ್ ಬೀರಬಲ್ ಕಥೆಗಳು, ರಾಮಾಯಣ, ಮಹಾಭಾರತ, ಬಾಲಮಂಗಳ ಹೀಗೆ ನನ್ನ ಪುಸ್ತಕದ ಓದು ಸಾಗಿತು. ಹಾಗೇಯೇ ಆಗ ಶನಿವಾರ ಬರುತ್ತಿದ್ದ 'ಪುಟಾಣಿ ವಿಜಯ' ಎಂಬ ಮಕ್ಕಳ ಪತ್ರಿಕೆಯನ್ನು ನಾನು ಅಪ್ಪ ಒಟ್ಟಿಗೆ ಕುಳಿತುಕೊಂಡು ಓದುತ್ತಿದ್ದೆವು 😍 ಶಾಲೆಯಲ್ಲಿ ಕೊಡುತ್ತಿದ್ದ ಪಠ್ಯಪುಸ್ತಕಗಳಲ್ಲಿ ಭಾಷಾ ಪುಸ್ತಕಗಳನ್ನು ಒಮ್ಮೆ ಮೊದಲೇ ಓದಿಬಿಡುತ್ತಿದ್ದೆ.  ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೈತ್ರೇಯಿ ಗುರುಕುಲವನ್ನು ಸೇರಿದ ಮೇಲೆ, ಅಲ್ಲಿಯ ಗ್ರಂಥಾಲಯದಿಂದ ನಮಗೆ ಬೇಕಾದ ಪುಸ್ತಕಗಳನ್ನು ನಾವೇ ಆರಿಸಿ ತೆಗೆದು ಬರೀ ಓದುವುದಲ್ಲದೆ ನಮ್ಮ ಅನಿಸಿಕೆಗಳನ್ನು ಬರೆದಿಡಬೇಕಿತ್ತು. ಹಾಗಾಗಿ ಪುಸ್ತಕಗಳನ್ನು...

ಓದಿನ ಸುಖ "ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು"

Image
ಪುಸ್ತಕದ ಹೆಸರು: ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು ಲೇಖಕರು: ನೇಮಿಚಂದ್ರ            ನೇಮಿಚಂದ್ರರ 'ಬದುಕು ಬದಲಿಸಬಹುದು' ಪುಸ್ತಕವನ್ನು ಓದಿದವರಿಗೆ ಲೇಖಕಿಯ ಶೈಲಿ ಸುಪರಿಚಿತವೇ. ಬದುಕಿನಲ್ಲಿ ಎಷ್ಟೇ ಕಷ್ಟವಿರಲಿ ಆತ್ಮವಿಶ್ವಾಸ, ಸಕಾರಾತ್ಮಕ ಗುಣವನ್ನು ಬಿತ್ತುವುದು ನೇಮಿಚಂದ್ರರ ಬರಹದ ಉದ್ದೇಶ. 'ಬದುಕು ಬದಲಿಸಬಹುದು' ಪುಸ್ತಕದಲ್ಲಿ ಹಲವು ಘಟನೆಗಳನ್ನು ಉಲ್ಲೇಖಿಸುತ್ತಾ ಆ ಘಟನೆ ಯಾವ ಕಥೆಗೆ ಪ್ರೇರಣೆಯಾಯಿತೆಂದು ಕೂಡ ತಿಳಿಸಿದ್ದಾರೆ. ಹಾಗಾಗಿ ಇಲ್ಲಿದ್ದ ಹೆಚ್ಚಿನ ಕಥೆಗಳ 'ಸತ್ಯ ಕಥೆಗಳು' ಗೊತ್ತಿದ್ದರಿಂದ ನಿರೀಕ್ಷಿತ ಅಂತ್ಯವೆಂದೇ ಹೇಳಬಹುದು.            ಆಕಸ್ಮಿಕವಾಗಿ ಅಪಘಾತದಲ್ಲಿ ನೆನಪು ಕಳೆದುಕೊಂಡ ಪತ್ನಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಪತಿಯ ಹೋರಾಟ, ಜೊತೆ ಜೊತೆಗೆ ಈ ಪರಿಸ್ಥಿತಿಯನ್ನು ಅರಿಯದೆ ತನ್ನ ತಂದೆ ತಾಯಿಯ ಗೊಣಗಾಟವನ್ನು ಧಿಕ್ಕರಿಸಿ ಬದುಕುವ ಹೋರಾಟದ ಕಥೆಯನ್ನು 'ಮರಳಿ ಬದುಕಿಗೆ ಈ ಪಯಣ'ದಲ್ಲಿ ಓದಬಹುದು.                    ಕಾನ್ಸರ್ ಬಂದು ಮಾನಸಿಕವಾಗಿ ಕುಗ್ಗಿ, ಸಾವೊಂದೆ ಸತ್ಯ ಎಂಬಂತೆ ತಿಳಿದ ಸೂಕ್ಷ್ಮ ಮನಸ್ಥಿತಿಯ ಶಶಿ ತನ್ನ ಜೀವನದಲ್ಲಿ ಕಳೆದುಕೊಂಡ ಚೈತನ್ಯವನ್ನು ಮರಳಿ ಪಡೆಯುವ ಕಥೆ 'ಬದುಕು ನಿನ್ನಲ್ಲೆಂಥಾ ಮುನಿಸು'. ತನ್ನ ಗಂಡ ಇನ್ನೊಬ್ಬ ಹೆಂಗ...

ಓದಿನ ಸುಖ - "ಮನ್ವಂತರ"

Image
ಪುಸ್ತಕದ ಹೆಸರು : ಮನ್ವಂತರ ಲೇಖಕರು : ವಸುಮತಿ ಉಡುಪ                 ವಸುಮತಿ ಉಡುಪರ 'ಹೆಜ್ಜಾಲ' ಕೃತಿ ಓದಿದ ಮೇಲೆ ಗ್ರಂಥಾಲಯದಲ್ಲಿ ಕಂಡು ಓದಿದ ಪುಸ್ತಕ 'ಮನ್ವಂತರ'. ಲೇಖಕಿಯು ಹೇಳಿದಂತೆ ಕಾದಂಬರಿಯು 80ರ ದಶಕದ ಮಲೆನಾಡಿನ ಕೃಷಿ ಕುಟುಂಬದ ಕಥೆ. ತಂದೆ, ತಾಯಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿರುವ 5 ಮಂದಿಯ ಸಂಸಾರ. ಮನೆಯ ಯಜಮಾನನ ಅಕಾಲಿಕ ಮರಣ ಎಲ್ಲರನ್ನೂ ದಿಕ್ಕೆಡುವಂತೆ ಮಾಡುತ್ತದೆ. ಮಗ ಇನ್ನೂ ಚಿಕ್ಕವನಾದ್ದರಿಂದ, ದೊಡ್ಡಮಗಳು ಗೋದಾವರಿ ಹಾಗೂ ಅವಳ ಗಂಡನ ಸಹಕಾರದಿಂದ ಕೃಷಿ ಕೆಲಸಗಳು ನಡೆಯುತ್ತಿರುತ್ತವೆ. ವರ್ಷಗಳು ಕಳೆದಂತೆ ಕಥಾನಾಯಕಿ ಕಾವೇರಿಗೆ ಮದುವೆಯ ವಯಸ್ಸಾಗುತ್ತದೆ. ಮನೆಯ ಪರಿಸ್ಥಿತಿಗೆ ಬಲಿಪಶುವಾದ ಕಾವೇರಿ ತನ್ನ ಮದುವೆಯ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲೂ ಸಹ ಆಗದೇ ಅಕ್ಕ ಗೋದಾವರಿ ನೋಡಿದ, ಮನೆ ಅಳಿಯನಾಗಿ ಬಂದ ಗಂಡು ಜನಾರ್ದನನ್ನು ಮದುವೆಯಾಗುತ್ತಾಳೆ. ವಯಸ್ಸಿಗೆ ಸಹಜವಾಗಿ ತನ್ನದೇ ಸ್ವಂತ ಮನೆ, ಸಂಸ್ಕಾರವಂತ ಗಂಡನನ್ನು ಅಪೇಕ್ಷಿಸಿದ ಕಾವೇರಿಗೆ ಮುಂದೆ ಒಂದೊಂದಾಗಿ ಗಂಡನ ಅವಗುಣಗಳು ತಿಳಿಯತೊಡಗುತ್ತವೆ. ಇಡೀ ಮನೆಗಾಗಿ, ಅಮ್ಮನಿಗಾಗಿ, ತಮ್ಮನಿಗಾಗಿ ಕಾವೇರಿ ಮಾಡಿದ ತ್ಯಾಗವು ಗಂಡನ ದುರ್ಗುಣಗಳ ಮುಂದೆ ಮರೆಯಾಗತೊಡಗುತ್ತದೆ. ಇದರ ಜೊತೆಗೇ ರಜೆಯಲ್ಲಿ ಪೇಟೆಯಿಂದ ಬರುತ್ತಿದ್ದ ಅಕ್ಕ ಭಾವ ಹಾಗೂ ಮಕ್ಕಳಿಗೆ ಮರ್ಯಾದೆ, ಉಪಚಾರಗಳು ಸಿಗ...

ಓದಿನ ಸುಖ - "ಯಾವ ನಾಳೆಯೂ ನಮ್ಮದಲ್ಲ"

Image
ಪುಸ್ತಕದ ಹೆಸರು : ಯಾವ ನಾಳೆಯೂ ನಮ್ಮದಲ್ಲ ಲೇಖಕರು : ಉಷಾ.ಪಿ.ರೈ             ಕನ್ನಡದಲ್ಲಿ ಹಲವು ಕಥೆ-ಕಾದಂಬರಿಗಳನ್ನು ಬರೆದ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದ ಉಷಾ.ಪಿ.ರೈ ಅವರು ಬರೆದ ತಮ್ಮ ಆತ್ಮಕಥೆಯೇ 'ಯಾವ ನಾಳೆಯೂ ನಮ್ಮದಲ್ಲ'.           ಪುಸ್ತಕದ ಆರಂಭದಲ್ಲಿ ತಮ್ಮ ಬಾಲ್ಯದ ಜೀವನವನ್ನು ನೆನಪಿಸಿಕೊಂಡಿದ್ದಾರೆ ಲೇಖಕಿ. ತಮ್ಮ ಬಾಲ್ಯವನ್ನು ಸಮೃದ್ಧವಾಗಿಸಿದ್ದ ಉಡುಪಿಯ ಪರಿಸರದ ಅನುಭವದ ಜೊತೆಗೆ ಇಂದಿನ ಉಡುಪಿಯ ಪರಿಸರದ ಬಗ್ಗೆ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಮುಂದೆ ತಮ್ಮ ತಂದೆ ತಾಯಿಯ ಬಗ್ಗೆ ಅಭಿಮಾನದ ಮಾತನ್ನು ಹೇಳಿದ್ದಾರೆ ಲೇಖಕಿ. ತಂದೆ ಹೊನ್ನಯ್ಯ ಶೆಟ್ಟರು ನವಯುಗ ಪತ್ರಿಕೆಯ ಪ್ರವರ್ತಕರು ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿದವರು. ಪತ್ರಿಕೆಯನ್ನು ಹೊರತರಲು ತಂದೆ ಪಡುತ್ತಿದ್ದ ಕಷ್ಟ, ತಂದೆಯ ಎಲ್ಲಾ ಕೆಲಸಗಳನ್ನು ತಾಯಿ ಬೆಂಬಲಿಸುತ್ತಿದ್ದ ರೀತಿ, ಅಂದಿನ ಬಂಟರ ಜೀವನ ಪದ್ಧತಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಡಿದ್ದಾರೆ ಲೇಖಕಿ.             ಮುಂದೆ ವೈವಾಹಿಕ ಜೀವನ, ಬ್ಯಾಂಕ್ ಉದ್ಯೋಗ, ಅದರ ಜೊತೆ ಜೊತೆಗೆ ಹವ್ಯಾಸವಾದ ಬರವಣಿಗೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗಿನ ಅನುಭವಗಳು, ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅನುಭವಗಳು, ಸಾಹಿತಿಗಳ ಜೊತೆ ಒಡನಾಟ ಎಲ್ಲವನ್ನೂ ದಾಖಲ...

ಓದಿನ ಸುಖ - ಮನಿ ಮನಿ ಎಕಾನಮಿ

Image
         ಪುಸ್ತಕದ ಹೆಸರು: ಮನಿ ಮನಿ ಎಕಾನಮಿ ಲೇಖಕರು : ರಂಗಸ್ವಾಮಿ ಮೂಕನಹಳ್ಳಿ                ಹಣವೊಂದಿದ್ದರೆ ಏನನ್ನು ಬೇಕಾದರೂ ಮಾಡಲು ಸಾಧ್ಯ ಎಂಬುದು ನಮ್ಮೆಲ್ಲರ ಮನಸ್ಥಿತಿ. ಅದಕ್ಕೇ ತಾನೆ "ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ" ಎಂದು ಹಿರಿಯರು ಹೇಳಿದ್ದು. ಆದರೆ ಹಣವೊಂದು ಮಾತ್ರವಿದ್ದರೆ ಸಾಲದು. ಹಣವನ್ನು ಹೇಗೆ ಉಳಿತಾಯ ಹಾಗೂ ಹೂಡಿಕೆ ಮಾಡಬೇಕು? ವಿತ್ತ ಜಗತ್ತಿನ ಆಗು ಹೋಗುಗಳು, ಬೇರೆ ಬೇರೆ ದೇಶಗಳ ಆರ್ಥಿಕ ಪರಿಸ್ಥಿತಿ ಎಲ್ಲದರ ಬಗ್ಗೆಯೂ ವಿಸ್ತಾರವಾಗಿ, ಆದರೆ ಅತ್ಯಂತ ಸರಳವಾಗಿ ಎಲ್ಲರಿಗೂ, ವಾಣಿಜ್ಯ ವಿಭಾಗದ ಬಗ್ಗೆ ಏನೂ ಗೊತ್ತಿಲ್ಲದವರೂ ಸಹ ಸುಲಭವಾಗಿ ಅರ್ಥೈಸುವಂತೆ ಒಟ್ಟು ೨೫ ಲೇಖನಗಳಲ್ಲಿ ಬರೆದಿದ್ದಾರೆ ಲೇಖಕರು.            'ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆಗಳು' ಎಂಬ ಬರಹದಲ್ಲಿ ವಯಸ್ಸಾದವರಿಗೆ, ಕೆಲಸದಿಂದ ನಿವೃತ್ತರಾದವರಿಗೆ ಹೆಚ್ಚು ಅಪಾಯವಿಲ್ಲದಿರುವ ಹಣ ಉಳಿತಾಯದ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ. 'ಪೂರ್ಣ ಡಿಜಿಟಲೀಕರಣವೆಂದರೆ ಮತ್ತೇನಿಲ್ಲ ಹೆಚ್ಚಿನ ನಿಯಂತ್ರಣ' ಎಂಬ ಬರಹದಲ್ಲಿ ಡಿಜಿಟಲ್ ಪಾವತಿಯ ಮೂಲಕ ನಮ್ಮ ಇಷ್ಟಾನಿಷ್ಟಗಳ ಪ್ರೊಫೈಲ್ ಸಿದ್ಧವಾಗಿ ವರ್ಷದ ನಂತರ ನಾವು ಖರೀದಿಸುವ ಕಾರ್, ಸ್ಕೂಟರ್ ಮುಂತಾದುವುಗಳನ್ನು ನಾವು ಕೊಳ್ಳುವಂತೆ ಹೇಗೆ ಪ್ರೇರೇಪಿಸಲಾಗುತ್ತದೆ ಎ...

ಓದಿನ ಸುಖ - ಹಿಂದಿನ ನಿಲ್ದಾಣ

Image
              ಪುಸ್ತಕದ ಹೆಸರು : ಹಿಂದಿನ ನಿಲ್ದಾಣ ಲೇಖಕರು : ಶುಭಶ್ರೀ ಭಟ್ಟ             ಮನುಷ್ಯ ಯಾವಾಗಲೂ ಮುಂದಿನ ನಿಲ್ದಾಣದ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಅಂದರೆ ಸದಾ ಭವಿಷ್ಯದ ಬಗ್ಗೆ ಯೋಚನೆ ಹಾಗೂ ಯೋಜನೆ ರೂಪಿಸಿಕೊಳ್ಳುತ್ತಿರುತ್ತಾನೆ. ಅದೇ ಅವನನ್ನು ವರ್ತಮಾನದಲ್ಲಿ ಜೀವಂತವಾಗಿರಿಸುವುದು ಎನ್ನುವುದು ನನ್ನ ನಂಬಿಕೆ. ಆದರೆ ಈ ಪುಸ್ತಕದಲ್ಲಿ ಲೇಖಕಿ ತಮ್ಮ ಬಾಲ್ಯದ ಭಾವ ಜಗತ್ತನ್ನು ಪುಟ್ಟ ಪುಟ್ಟ ಲೇಖನಗಳ ಮೂಲಕ ಅಕ್ಷರ ರೂಪಕ್ಕಿಳಿಸಿದ್ದಾರೆ. ಇಲ್ಲಿರುವ ಎಲ್ಲಾ ಬರಹಗಳು ಲೇಖಕಿಯ ಅನುಭವಗಳು. ಮುನ್ನುಡಿಯಲ್ಲಿ ಹಿರಿಯರಾದ ಸುಬ್ರಾಯ ಚೊಕ್ಕಾಡಿಯವರು ಹೇಳಿದಂತೆ "ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು" ಎನ್ನುವಂತೆ ಅಂದು ಅನುಭವಿಸಿದ ದುಃಖವು ಇಂದು ನಗೆಯನ್ನು ಉಕ್ಕಿಸಿದರೆ, ಅಂದಿನ ಖುಷಿಯ ಘಟನೆಗಳು ಇಂದು ಕಣ್ಣನ್ನು ತೇವಗೊಳಿಸುತ್ತವೆ. ಅಂತಹ ಹಲವಾರು ಉದಾಹರಣೆಗಳು ಈ ಪುಸ್ತಕದಲ್ಲಿ ಸಿಗುತ್ತವೆ.              'ಪರೀಕ್ಷಾಗಾಲದಲ್ಲಿ ಜನಿಸುವ ಕಥೆಗಳು ' ಎಂಬ ಬರಹದಲ್ಲಿ ಎಲ್ಲಾ ಕಾಲದ ಮಕ್ಕಳ ತಲೆನೋವಾಗಿರುವ, ಪರೀಕ್ಷೆಯ ಓದುವ ಸಮಯದಲ್ಲಿ ಮಾಡುವ ಕಿತಾಪತಿಗಳನ್ನು ಹೇಳುತ್ತಾ, ಪ್ರಕೃತಿಯ ಮಡಿಲಲ್ಲಿ ಓದುತ್ತಾ, ಪ್ರಕೃತಿಯ ಅತ್ಯಂತ ಸೂಕ್ಷ್ಮ ವಿಷಯಗಳನ್ನೂ ಗಮನಿಸುತ್ತಾ ಅದನ್ನೆಲ್ಲಾ ಅಕ್...