Posts

ಓದಿನ ಸುಖ - "ಅಮೇರಿಕದಲ್ಲಿ ನಾನು"

Image
ಪುಸ್ತಕದ ಹೆಸರು : ಅಮೇರಿಕಾದಲ್ಲಿ ನಾನು  ಲೇಖಕರು : ಬಿ ಜಿ ಎಲ್ ಸ್ವಾಮಿ               ಕಾಲೇಜಿನಲ್ಲಿದ್ದಾಗ ಬಿ ಜಿ ಎಲ್ ಸ್ವಾಮಿಯವರ ತಮಿಳು ತಲೆಗಳ ನಡುವೆ, ಹಸಿರು ಹೊನ್ನು ಮುಂತಾದ ಕೃತಿಗಳನ್ನು ಓದಿದ್ದರಿಂದ ಅವರ ಹಾಸ್ಯ ಭರಿತ ಶೈಲಿ ಪರಿಚಿತವೇ ಆಗಿತ್ತು. ಆದರೆ ಈ ಪುಸ್ತಕದ ಬಗ್ಗೆ ಎಲ್ಲಿಯೂ ವಿಮರ್ಶೆ, ಅನಿಸಿಕೆಯನ್ನು ಓದಿಲ್ಲದಿದ್ದರಿಂದ ಕುತೂಹಲದಿಂದ ಕೈಗೆತ್ತಿಕೊಂಡೆ. ಈ ಪುಸ್ತಕವನ್ನು ಪ್ರವಾಸ ಕಥನ ಎನ್ನುವುದಕ್ಕಿಂತ ಅಮೇರಿಕಾದಲ್ಲಿ ಅನುಭವಿಸಿದ ಲೇಖಕರ ಅನುಭವ ಕಥನ ಎಂದರೆ ಹೆಚ್ಚು ಸೂಕ್ತವಾಗುತ್ತದೆ. ಲೇಖಕರ ಹಾಗೂ ಸಹ ಪ್ರಯಾಣಿಕರ ಪರದಾಟದ ಹಾಸ್ಯ ಪ್ರಸಂಗಗಳು ನಮ್ಮನ್ನು ನಗಿಸುತ್ತವೆ.              ಮೊದಲ ಬರಹ 'ಹಡಗಿನಲ್ಲಿ'. 2ನೇ ಮಹಾಯುದ್ಧ ದಿಂದ ಹಿಂತಿರುಗುತ್ತಿದ್ದ ಸೈನಿಕರೊಂದಿಗೆ ಹಡಗಿನಲ್ಲಿ ಪಯಣಿಸುತ್ತಿದ್ದಾಗ ಒಂದೇ ಆವರಣದಲ್ಲಿ ಸುಮಾರು 300 ಜನರ ಉಪಯೋಗಕ್ಕಿರುವ, ಎದುರು ಸಾಲಿನಲ್ಲಿ ಕೂತವರನ್ನು, ಬಂದು ಹೋಗುವವರನ್ನು ಕಾಣುವಂತೆ ನಿರ್ಮಿಸಿದ ಶೌಚಾಲಯಗಳಲ್ಲಿ ಭಾರತೀಯರ ಪರದಾಟ, ಅದನ್ನು ಕಂಡು ಹಡಗಿನ ಕ್ಯಾಪ್ಟನ್ ಸೂಚಿಸಿದ ಪರಿಹಾರ ಎಲ್ಲವೂ ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.             'ನನ್ನ ಟೋಪಿ' ಎಂಬ ಶೀರ್ಷಿಕೆಯ ಬರಹ...

ಓದಿನ ಸುಖ 'ಸೆಕೆಂಡ್ ಇನ್ನಿಂಗ್ಸ್'

Image
ಪುಸ್ತಕದ ಹೆಸರು: ಸೆಕೆಂಡ್ ಇನ್ನಿಂಗ್ಸ್  ಲೇಖಕರು : ಗೀತಾ ಬಿ.ಯು.             'ಸೆಕೆಂಡ್ ಇನ್ನಿಂಗ್ಸ್' ಸುಮಾರು ಹದಿನೇಳು ಸಣ್ಣ ಕಥೆಗಳ ಸಂಗ್ರಹ. ಲೇಖಕಿಯೇ ಹೇಳಿದಂತೆ ವೃದ್ಧಾಪ್ಯ, ಸಂಬಂಧಗಳು, ಸ್ವಾರ್ಥ, ಆಸ್ತಿ, ಹಕ್ಕು ಬಾಧ್ಯತೆಗಳು ಇಲ್ಲಿರುವ ಕಥೆಗಳ ಕೇಂದ್ರ. ಕಥೆಯೊಂದನ್ನು ಬರೆಯಲು ಪ್ರೇರಣೆಯಾದ ಘಟನೆ, ಕಾಡಿದ ಅಂಶ, ತನ್ನ ಸಂಬಂಧದೊಳಗೂ ಲೆಕ್ಕಾಚಾರ ಹಾಕುವ ಮನುಷ್ಯನ  ಸ್ವಭಾವ, ತಲೆಮಾರುಗಳ ನಡುವಿನ ಅಂತರ, ಕಥೆ ಪ್ರಕಟವಾದ ಪತ್ರಿಕೆ, ಕಥೆಗೆ ಓದುಗರ ಪ್ರತಿಸ್ಪಂದನೆ ಹೀಗೆ ಲೇಖಕಿಗೆ ಕಾಡಿದ ಅಂಶ ಇವೆಲ್ಲವನ್ನೂ ಪ್ರತಿ ಕಥೆಯ ಮೊದಲು ಬರೆದಿದ್ದಾರೆ. ಹಾಗಾಗಿ ಕಥೆಯೊಂದನ್ನು ಓದುವ ಮೊದಲು ಕಥೆಯ ಹೂರಣ, ಕಥೆಯ ಆಶಯ ಓದುಗರಿಗೆ ಮನದಟ್ಟಾಗುವುದು ಈ ಪುಸ್ತಕದ ಧನಾತ್ಮಕ ಅಂಶ. ಸರಳ, ಸುಂದರ ಭಾಷೆ, ಓದಿಸಿಕೊಂಡು ಹೋಗುವ ಭಾಷಾ ಶೈಲಿಯಿಂದಾಗಿ ಪುಸ್ತಕ ಬಹಳ ಇಷ್ಟವಾಗುತ್ತದೆ.             ಆತ್ಮೀಯರಿಗೆ ಕೊಡುವ ಉಡುಗೊರೆಯಲ್ಲೂ ಲೆಕ್ಕಾಚಾರ ಹಾಕುವ ಮನುಷ್ಯನನ್ನು ಪ್ರೀತಿ, ವಿಶ್ವಾಸ ಮುಂತಾದ ಗುಣಗಳು ಆಳದೆ ಸ್ವಾರ್ಥ, ತಿರಸ್ಕಾರಗಳು ಆಳುತ್ತವೆ ಎಂದು ಬೇಸರ ವ್ಯಕ್ತಪಡಿಸುತ್ತಾ ಲೇಖಕಿ 'ಆಸೆ' ಎಂಬ ಕಥೆಯಲ್ಲಿ ನಾಯಕಿಯ ಮೂಲಕ "ಆಸೆ ಅಂದ್ರೆ ನಾನೇ ಮಾಡಿಸ್ಕೋಬೇಕು, ತೊಟ್ಕೋಬೇಕು, ಉಟ್ಕೋಬೇಕು ಅನ್ನೋದಷ್ಟೇ ಅಲ್ಲ. ...

ನ್ಯಾನೋ ಕಥೆಗಳು

ನ್ಯಾನೋ ಕಥೆ ೧ ಸಂದು ಗೊಂದಲಿನಲ್ಲಿರುವ, ಗಾಳಿ ಬೆಳಕು ಸರಿಯಾಗಿ ಬೀಳದ ಸಣ್ಣ ಗೂಡಿನಂತಹ ಡೇ ಕೇರ್ ನಲ್ಲಿ ಅಳುತ್ತಿರುವ ತನ್ನ ಮಗುವನ್ನು ಬಿಟ್ಟು, ವಿಶಾಲವಾದ ಮನೆಯಲ್ಲಿ, ತನ್ನ ತಾಯಿಯನ್ನು ನೆನೆದು ಅಳುತ್ತಿದ್ದ ಮಗುವನ್ನು ಸಮಾಧಾನಗೊಳಿಸುತ್ತಿದ್ದಳು ಅವಳು. ನ್ಯಾನೋ ಕಥೆ ೨ ನಗರದ ಪ್ರಸಿದ್ಧ ಹಾಡುಗಾರ್ತಿ, ರಾತ್ರಿಯ ಸಂಗೀತ ಕಛೇರಿಯನ್ನು ಮುಗಿಸಿ ಬಂದಾಗ ಅವಳ ಮಗು ಕೆಲಸದವಳ ಕೀರಲು ಧ್ವನಿಯ ಜೋಗುಳವನ್ನು ಕೇಳುತ್ತಾ ನಿದ್ರೆಗೆ ಜಾರಿತ್ತು.

ಓದಿನ ಸುಖ "ಅಮೆರಿಕನ್ನಡದ ಕಥೆಗಳು"

ಪುಸ್ತಕದ ಹೆಸರು : ಅಮೆರಿಕನ್ನಡದ ಕಥೆಗಳು ಸಂಪಾದಕರು : ನಾಗಲಕ್ಷ್ಮಿ ಹರಿಹರೇಶ್ವರ           ಈ ಪುಸ್ತಕವು ಕನ್ನಡ ನೆಲದಿಂದ ಅಮೇರಿಕಾಕ್ಕೆ ವಲಸೆ ಹೋದ ಹಲವರು ತಮ್ಮ ತಾಯ್ನುಡಿಯಲ್ಲಿ ಬರೆದ ಕಥೆಗಳ ಸಂಗ್ರಹ. ತಮ್ಮ ಅನುಭವಕ್ಕೆ ದಕ್ಕಿದ ವಿಷಯಗಳ ಮೇಲೆ ಕಥೆ, ಪ್ರಬಂಧಗಳ ಮೂಲಕ ಅಕ್ಷರ ರೂಪಕ್ಕಿಳಿಸಿದ್ದಾರೆ. ವಲಸೆ ಎಂಬುದು ಮಾನವ ನಾಗರೀಕತೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ವಲಸೆ ಹೋಗುವಾಗ ತಮ್ಮ ಪ್ರೀತಿಯ ತಾಯ್ನೆಲವನ್ನು ಬಿಟ್ಟು ಬರುವಾಗಿನ ದುಃಖ, ಸಂಬಂಧಿಕರನ್ನು ಬಿಟ್ಟು ಬರುವ ಬೇಸರ, ಮಾನಸಿಕ ತಾಕಲಾಟ, ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳುವ ಅನಿವಾರ್ಯತೆ, ಹೊಸ ನೆಲದ ಸಂಪ್ರದಾಯಗಳನ್ನು ಪರಿಪಾಲಿಸುವ ಜೊತೆ ಜೊತೆಗೆ ಅಲ್ಲಿನ ಜೀವನ ಶೈಲಿಯನ್ನು ಅಪ್ಪಿಕೊಳ್ಳುವ ಅನಿವಾರ್ಯತೆ, ಅಮೇರಿಕಾದ ವೀಸಾ ಪಡೆದುಕೊಳ್ಳುವ ಪಡಿಪಾಟಲು ಹೀಗೆ ಹಲವು ಭಾವಗಳು ವಿವಿಧ ಕಥೆಗಳಲ್ಲಿ ವ್ಯಕ್ತವಾಗಿವೆ. ಇದರಲ್ಲಿ ಕಥೆಗಳನ್ನು ಬರೆದವರು ಯಾರೂ ವೃತ್ತಿಯಿಂದ ಕಥೆಗಾರರಲ್ಲ. ಆದರೂ ಸಹ ಎಲ್ಲಾ ಕಥೆಗಳು ಉತ್ತಮವಾಗಿದ್ದು, ಓದಿಸಿಕೊಂಡು ಹೋಗುತ್ತವೆ. ಕೆಲವು ಕಥೆಗಳು ನಗಿಸಿದರೆ, ಮತ್ತೆ ಕೆಲವು ವಿಷಾದವನ್ನು ಮೂಡಿಸುತ್ತವೆ.

ಓದಿನ ಸುಖ " ಸಾವೇ ಬರುವುದಿದ್ದರೆ ನಾಳೆ ಬಾ!"

Image
ಪುಸ್ತಕದ ಹೆಸರು: ಸಾವೇ ಬರುವುದಿದ್ದರೆ ನಾಳೆ ಬಾ! ಲೇಖಕರು : ನೇಮಿಚಂದ್ರ            ಪುಸ್ತಕದ ಶೀರ್ಷಿಕೆಯಾದ 'ಸಾವೇ ಬರುವುದಿದ್ದರೆ ನಾಳೆ ಬಾ!' ಮೊದಲ ಲೇಖನ. ಸಾವು 'ಒಳಗೆ ಬರಲೇ?' ಎಂದಾಗ 'ಸ್ಪಲ್ಪ ಕೆಲಸವಿದೆ' ಎಂದ ಅನುಪಮ ನಿರಂಜನ 13 ವರ್ಷಗಳಷ್ಟು ಕಾಲ ಬತ್ತದ ಜೀವನೋತ್ಸಾಹದೊಂದಿಗೆ ಬದುಕಿದ ಬಗ್ಗೆ, 1970 ದಶಕದಲ್ಲಿ 'ಟಾಪ್ ಅಮೆರಿಕನ್ ಫ್ಯಾಷನ್ ಡಿಸೈನರ್' ಎಂದು ಗುರುತಿಸಲ್ಪಟ್ಟ ಮಾಯಾ ತಿವಾರಿ ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲಿ ಕೊನೆಗೆ ಯೋಗ, ಪ್ರಾಣಾಯಾಮ, ಧ್ಯಾನ, ಪೌಷ್ಟಿಕ ಆಹಾರದ ಮೂಲಕ ತಮ್ಮ ಜೀವನ ವಿಧಾನವನ್ನು ಬದಲಿಸಿ ಮರಳಿ ಬದುಕಿಗೆ ಬಂದ ಬಗ್ಗೆ ಈ ಬರಹದಲ್ಲಿ ಬರೆದಿದ್ದಾರೆ.          ಇಡೀ ದೇಹ ಸ್ವಾಧೀನವಿಲ್ಲದ, ಮಾತನಾಡಲಾರದ, ತುತ್ತು ಕೂಡ ನುಂಗಲಾರದ ಫೀಡಿಂಗ್ ಟ್ಯೂಬ್ ನ ಮೂಲಕ ಬದುಕುಳಿದಿದ್ದ ವಿಜ್ಞಾನಿ ಸ್ಪೀಫನ್ ಹಾಕಿಂಗ್ ನ ಜೀವನ ಕಥನ, ತಾವು ಪೈಲೆಟ್ ಆಗಿದ್ದ ಅನಿಲ್ ಕುಮಾರ್ ತಮ್ಮ ಜೀವನದಲ್ಲಿ ನಡೆದ ಅಪಘಾತದಿಂದಾಗಿ, ಕುತ್ತಿಗೆ ಕಳಗಿನ ಯಾವೊಂದು ಭಾಗಗಳೂ ಸಹ ಸ್ವಾಧೀನವಿಲ್ಲವಾಗಿ, ಗಾಲಿ ಕುರ್ಚಿಗೆ ಬಂಧಿತರಾದಾಗಲೂ ಸಹಾ ತಮ್ಮ ಜಿವನವನ್ನು ಹೇಗೆ ನಡೆಸಿದರು ಎಂಬ ಸ್ಫೂರ್ತಿಯ ಬರಹವನ್ನು 'ಬದುಕು ನಿಲ್ಲಲಿಲ್ಲ ಅಲ್ಲಿಗೇ' ಯಲ್ಲಿ ಬರೆದಿದ್ದಾರೆ.               'ಮಿದುಳು ಮತ್ತೆ ಕಲಿಯಬಲ್ಲುದು'...

ಸೋತು ಗೆದ್ದವರು

ಪುಸ್ತಕದ ಹೆಸರು : ಸಾವೇ ಬರುವುದಿದ್ದರೆ ನಾಳೆ ಬಾ!(ಬದುಕು ಬದಲಿಸಬಹುದು -2) ಲೇಖಕರು : ನೇಮಿಚಂದ್ರ              ಪುಸ್ತಕದ ಶೀರ್ಷಿಕೆಯೇ ಅಂಕಣವಾಗಿರುವ ಬರಹದಲ್ಲಿ ತೀವ್ರತರವಾದ ಕ್ಯಾನ್ಸರ್ ನಿಂದ ಬಳಲಿ, ಸಾವಿನ ಕದ ತಟ್ಟಿ ಬಂದು ಮತ್ತೆ ಎದ್ದು ನಿಂತವರ ಕಥೆಯಿದೆ. ನಮ್ಮ ಕನ್ನಡದವರಾದ ಅನುಪಮಾ ನಿರಂಜನ ಅವರು ಸಾವನ್ನು ತಡೆದು ನಿಲ್ಲಿಸಿ, ಶಸ್ತ್ರಚಿಕಿತ್ಸೆ, ರೇಡಿಯೇಶನ್ ಹಾಗೂ ಕಿಮೋಥೆರಪಿಗಳ ನಡುವೆಯೂ ಜೀವನೋತ್ಸಾಹ ಕುಗ್ಗದೇ  ಹದಿಮೂರು ವರ್ಷಗಳ ಕಾಲ ಬದುಕಿದ್ದನ್ನು ಉಲ್ಲೇಖಿಸುತ್ತಾ ಮಾಯಾ ತಿವಾರಿಯ ಕಾನ್ಸರ್ ಹೋರಾಟದ ಸೋಲು ಗೆಲುವನ್ನು ದಾಖಲಿಸಿದ್ದಾರೆ.                   ಮೂಲತಃ ಭಾರತೀಯರಾದ ಮಾಯಾ ತಿವಾರಿಯವರ ಪೂರ್ವಜರನ್ನು ಬ್ರಿಟಿಷರು, ಭಾರತದಿಂದ ದಕ್ಷಿಣ ಅಮೆರಿಕದ ಪುಟ್ಟ ದೇಶವಾದ 'ಗುಯಾನಾ' ಕ್ಕೆ ಗಂಟು ಮೂಟೆಗಳಂತೆ ಸಮುದ್ರದ ಮೂಲಕ ಸಾಗಿಸಿದ್ದರು. ಆ ದಾರಿಯಲ್ಲಿ ಎಷ್ಟೋ ಮಹಿಳೆಯರ ಮಾನಭಂಗವನ್ನು ಮಾಡಿದ್ದರು. ಎಷ್ಟೋ ಗಂಡಸರನ್ನು ಹೊಡೆದು ಬಡಿದಿದ್ದರು. ಇನ್ನು ಕೆಲವರನ್ನು ಸಮುದ್ರಕ್ಕೆ ಎಸೆದಿದ್ದರು. ಈ ಭೀಕರ ಇತಿಹಾಸದ ನೋವಿನ ನೆನಪನ್ನು ಮುಂದಿನ ಪೀಳಿಗೆಯವರಾದ ಮಾಯಾ ತಿವಾರಿ ಪಿತ್ರಾರ್ಜಿತವಾಗಿ ಪಡೆದಿದ್ದರು. ಅದರಿಂದ ಪಾರಾಗಲು ಯೋಗ, ಪ್ರಾಣಾಯಾಮ, ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಮುಂದೆ ಗುಯಾನಾ ಬ್ರಿಟಿಷ...

ಸೋತು ಗೆದ್ದವರು

ಪುಸ್ತಕದ ಹೆಸರು : ಸಾವೇ ಬರುವುದಿದ್ದರೆ ನಾಳೆ ಬಾ!(ಬದುಕು ಬದಲಿಸಬಹುದು -2) ಲೇಖಕರು : ನೇಮಿಚಂದ್ರ               "ವಿಧಿ ಬರೆದ ಬರಹವನು ಅಳಿಸಿ" ಎಂಬ ಬರಹದಲ್ಲಿ ಬದುಕು ತನ್ನತ್ತ ಎಸೆದ ಸವಾಲನ್ನು ಸಾಹಸದಿಂದ ಎದುರಿಸಿದ, ಹಿಮಾಲಯ ಹಾಗೂ ರಾಜಸ್ಥಾನದ ಮರುಭೂಮಿಯಲ್ಲಿ ಸಾವಿರಾರು ಮೈಲಿಗಳ ಕಾರ್ ರ್ಯಾಲಿಯಲ್ಲಿ ಭಾಗವಹಿಸಿದ ಮೊದಲ ಪ್ಯಾರಪ್ಲೇಜಿಕ್ ಸಾಹಸಿ ಮಹಿಳೆ ದೀಪಾ ಮಲ್ಲಿಕ್ ಬಗ್ಗೆ ಬರೆದಿದ್ದಾರೆ ಲೇಖಕಿ.              ಹರಿಯಾಣ ಮೂಲದ ದೀಪಾ ಅವರು ತಮ್ಮ ಮೂವತ್ತನೇ ವಯಸ್ಸಿನವರೆಗೂ ಸಾಧಾರಣ ಗೃಹಿಣಿಯಾಗಿದ್ದವರು. ಪತಿ ಕರ್ನಲ್ ವಿಕ್ರಮ್ ಸಿಂಗ್ ಮಲ್ಲಿಕ್ ಭೂಸೇನೆಯಲ್ಲಿ ಅಧಿಕಾರಿ. 1999 ನೇ ಇಸವಿಯಲ್ಲಿ ದೀಪ ಅವರ ಬೆನ್ನಿನ ಹುರಿಯಲ್ಲಿ ಗಡ್ಡೆಯೊಂದು ಬೆಳೆದು ಅವರ ಬದುಕಿನ ತಿರುವನ್ನೇ ಬದಲಿಸಿತು.ಇತ್ತ ಪತಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡುತ್ತಿದ್ದರೆ, ದೀಪ ಅವರು ತಮ್ಮ ಅನಾರೋಗ್ಯದೊಂದಿಗೆ ಹೋರಾಡುತ್ತಿದ್ದರು. ಈ ಗಡ್ಡೆಯನ್ನು ತೆಗೆಯುವುದರಿಂದ ಮಿದುಳು ಮತ್ತು ಸೊಂಟದ ಕೆಳಗಿನ ದೇಹದ ನಡುವೆ ಕೊಂಡಿ ಕಡಿದು ಹೋಗುವುದರಿಂದ ಮಲ ಮೂತ್ರಗಳ ಸಹಜ ವಿಸರ್ಜನೆ ಸಾಧ್ಯವಿಲ್ಲದೆ, ಗಾಲಿ ಕುರ್ಚಿಗೆ ಅಂಟಬೇಕಾದ ಅನಿವಾರ್ಯತೆ ದೀಪಾ ಅವರಿಗೆ ಎದುರಾಗುತ್ತದೆ. ಆದರೆ ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಆಘಾತಗೊಂಡರೂ ಚೇತರಿಸಿಕೊಳ್ಳುವ ದೀಪ ಈ ಪ್ರತಿಕೂಲ ಪರಿಸ್ಥಿತಿಯನ್ನು ತಮ...