Posts

Showing posts from June, 2023

ಓದಿನ ಸುಖ "ಪುರಸ್ಕಾರ"

Image
ಪುಸ್ತಕದ ಹೆಸರು: ಪುರಸ್ಕಾರ ಲೇಖಕರು: ಚಿತ್ರಲೇಖ                    ಪುರಸ್ಕಾರವು ಎರಡು ಕಿರು ಕಾದಂಬರಿಗಳಾದ 'ಪುರಸ್ಕಾರ' ಹಾಗೂ 'ಪ್ರತೀಕಾರ' ಗಳ ಗುಚ್ಛ. ಎರಡು ಕಥೆಗಳಲ್ಲಿ ವಿಭಿನ್ನ ಕಾಲಮಾನಕ್ಕೆ ಸೇರಿದ ಇಬ್ಬರು ಹೆಣ್ಣು ಮಕ್ಕಳ ಜೀವನದ ಕಥೆಯನ್ನು ನಿರೂಪಿಸಿದ್ದಾರೆ ಲೇಖಕಿ.           ಹೆಣ್ಣು ಅಕ್ಷರಸ್ಥಳಾಗಿರಲಿ ಅಥವಾ ಅನಕ್ಷರಸ್ಥಳಾಗಿರಲಿ ಆಂತರ್ಯದಲ್ಲಿ ಅವಳು ಸ್ವಾಭಿಮಾನಿಯಾಗಿರುತ್ತಾಳೆ. ಅಂತಹ ಒಬ್ಬ ಅನಕ್ಷರಸ್ಥ ಸ್ವಾಭಿಮಾನೀ ಹೆಣ್ಣೊಬ್ಬಳ ಕಥೆಯೇ 'ಪುರಸ್ಕಾರ'.          ಈ ಕಥೆಯ ಪ್ರಮುಖ ಪಾತ್ರ ಸುಂದರಮ್ಮ. ಹುಟ್ಟಿದಾಗ ಸರಸ್ವತಿ ಎಂಬ ಹೆಸರನ್ನು ಹೊತ್ತ ಸುಂದರಮ್ಮ ಹತ್ತನೇ ವಯಸ್ಸಿಗೇ ಮದುವೆಯಾಗಿ ಗಂಡನ ಮನೆಯನ್ನು ಸೇರಿದಳು. ಮದುವೆಯಾಗಿದ್ದು ಹಳ್ಳಿಯಲ್ಲಿದ್ದ ವಿಜ್ಞಾನಿಯನ್ನು. ಸದಾ ಆಕಾಶ,ನಕ್ಷತ್ರ ಎಂದು ಅಧ್ಯಯನದಲ್ಲೇ ಮುಳುಗಿದ್ದ ಆದಿಕೇಶವನನ್ನು. ಅತ್ಯಂತ ವಿಕ್ಷಿಪ್ತವಾದ ಪಾತ್ರ ಆದಿಕೇಶವನದ್ದು. ಆತನದ್ದು ವಿಚಿತ್ರ ಸ್ವಭಾವ. ಹೆಂಡತಿಯ ಮೇಲೆ ಸ್ವಲ್ಪವೂ ಪ್ರೀತಿಯಿಲ್ಲ. ಪ್ರೀತಿಯಿಲ್ಲದಿದ್ದರೂ ಚಿಂತೆಯಿಲ್ಲ. ಆದರೆ ಆತನಿಗೆ ತನ್ನ ಹೆಂಡತಿಯ ಮೇಲೆ ಕರುಣೆಯಿಲ್ಲ, ಜೊತೆಗೆ ಕುರೂಪಿಯಾಗಿದ್ದ, ಕಲಾವತಿಯಾಗಿದ್ದ ತನ್ನ ಹೆಂಡತಿಯು ರಚಿಸುತ್ತಿದ್ದ ರಂಗೋಲಿಯನ್ನಾಗಲೀ, ಹೂ ಮಾಲೆಯನ್...

ಹೀಂಗೊಂದು ದೋಸೆ ಪುರಾಣ

Image
        "ಅಮ್ಮಾ... ನಾಳೆ ಕಾಪಿಗೆಂತ?" ಹೀಂಗಿಪ್ಪ ಒಂದು ಪ್ರಶ್ನೆಯ ಆನುದೆ ಎನ್ನ ತಮ್ಮಂದೇ ದಿನಾ ಕೇಳಿಯೊಂಡು ಇತ್ತಿದ್ದೆಯ. ಅದು ಹೊತ್ತೋಪಗಳೊ ಅಲ್ಲಾ ಕಸ್ತಲಪ್ಪಗಳೊ ಕೇಳಿಯೊಂಡು ಇದ್ದದು ಹೇಳಿ ನಿಂಗ ಗ್ರೇಷಿರೆ ತಪ್ಪು. ಉದಿಯಪ್ಪಾಗಣ ಕಾಪಿ ಕುಡಿವಾಗಳೆ ಎಂಗೊಗೆ ಮರುದಿನದ ಕಾಪಿಯ ಚಿಂತೆ. "ಹೋ ಎಂತರ ನಿಂಗಳದ್ದು ರಗಳೆ? ಇನ್ನು ಎನ್ನದೇ ಇಂದ್ರಾಣ ಕಾಪಿ ಕುಡುದು ಆಯಿದಿಲ್ಲೆ. ನಿಂಗಳದ್ದು ಆಗಳೆ ನಾಳಂಗೆ ಕಾಪಿಗೆಂತ ಹೇಳಿ ಸುರುವಾತ ಜಗಳ" ಹೇಳಿ ಅಮ್ಮನ ಸ್ವರ ಕೇಳಿದ್ದೇ ತಡ ಎಂಗ ಗಪ್ ಚುಪ್. ಅದು ರಜ್ಜ ಹೊತ್ತಷ್ಟೆ ಹೇಳಿ ಅಮ್ಮಂಗು ಗೊಂತಿದ್ದು ಹಾಂಗಾಗಿ ನಾಳಂಗೆ ಕಾಪಿಗೆಂತ ಮಾಡುದು ಹೇಳಿ ಅಮ್ಮನ ತಲೆಬೆಶಿ. ಇದು ಸಾಮಾನ್ಯವಾಗಿ ಎಲ್ಲರ ಮನೆ ಮನೆ ಕಥೆ.             ಸಾಮಾನ್ಯವಾಗಿ ಹವೀಕರ ಮನೇಲಿ ಕಾಪಿಗೆಂತಾ ಹೇಳಿ ಕೇಳೆಕ್ಕು ಹೇಳಿಯೇ ಇಲ್ಲೆ. ಹೆಚ್ಚಿನವರ ಮನೇಲಿದೆ ದೋಸೆಯೇ. ಹಾಂಗೆಯೇ ಎಂಗಳ ಮನೆಲಿದೆ ಯಾವಾಗಳೂ ದೋಸೆಯೇ. ದೋಸೆಗೆ ಕಡವಲೆ ಮುನ್ನಾಣ ದಿನವೇ ಅಕ್ಕಿಯ ಬೊದುಲ್ಲೆ ಹಾಕೆಕ್ಕು. ಹಾಂಗಾಗಿ ಹೊತ್ತೋಪಗದ ಒಳ ನಾಳಂಗೆ ಕಾಪಿಗೆಂತ ಹೇಳಿ ಮೊದಲೇ ನಿರ್ಧರಿಸಿ ಆಯೆಕ್ಕು. ಅಕ್ಕಿ ಮಾತ್ರ ಬೊದುಲ್ಲೆ ಹಾಕಿ ಆ ಹಿಟ್ಟಿನ ನೀರು ಮಾಡಿ ಎರದರೆ ರುಚಿರುಚಿಯಾದ ತೆಳ್ಳವು ಸಿದ್ಧ. ಅದರೊಟ್ಟಿಂಗೆ ಬೆಲ್ಲ ಕಾಯಿಸುಳಿಯೋ, ಬಾಳೆ ಹಣ್ಣು ರಸಾಯನವೋ ಇದ್ದರೆ ಸ್ವರ್ಗ ಸುಖ. ಕಾವಲಿಗೆಯ...

ನಿನ್ನಂತಹ ಅಮ್ಮ ನಾನಾಗಲಾರೆ

Image
                      ಭಾಗ 1                                 ಮನೆಗೆಲಸ, ಹಟ್ಟಿ, ತೋಟದ ಕೆಲಸ ಇವೆಲ್ಲವುಗಳ ಮಧ್ಯೆ ಆಯಾ ಕಾಲಕ್ಕೆ ಸಿಗುವ, ನಮ್ಮ ತೋಟದಲ್ಲಿ ಬಿಡುವ ಹಣ್ಣು, ಕಾಯಿ, ತರಕಾರಿಗಳಿಂದ ವಿಶೇಷ ರುಚಿಗಳನ್ನು ಮಾಡಲೇಬೇಕು ಎಂಬುದು ಅಮ್ಮನ ಅಲಿಖಿತ ನಿಯಮ. ಮಾವಿನಕಾಯಿ ಸಿಗುವ ಸಮಯದಲ್ಲಿ ಉಪ್ಪಿನಕಾಯಿ ಹಾಕುವ ಸಂಭ್ರಮ. ಹದವಾದ ಕಾಯಿಗಳನ್ನು ಕೊಯಿದು, ಆರಿಸಿ ತಂದು, ಚೆನ್ನಾಗಿರುವುದನ್ನು ಆರಿಸಿ, ಒರೆಸಿ, ನೀರು ತಾಕದಂತೆ ಉಪ್ಪಿನಕಾಯಿ ಹಾಕುವುದನ್ನು ನೋಡಿದರೆ ಅಮ್ಮನೇ ಉಪ್ಪಿನಕಾಯಿ ಹಾಕುವ ಇಡೀ ಯಜ್ಞ ಕಾರ್ಯದ ಪ್ರಧಾನ ಅಧ್ವರ್ಯು! ಸ್ವಲ್ಪ ನೀರು ತಾಕಿದರೂ ಉಪ್ಪಿನಕಾಯಿ ಹಾಳಾಗುವ ಸಂಭವವಿರುವುದರಿಂದ ಆ ಜಾಗ ನಮಗೆಲ್ಲಾ ನೋ ಎಂಟ್ರಿ ಪ್ರದೇಶವಾಗಿ ಬಿಡುತ್ತಿತ್ತು! ಇನ್ನು ಬೇಸಿಗೆ ಬಂತೆಂದರೆ, ನಮಗೆ ರಜಾ ಸಮಯವಾದ್ದರಿಂದ ನಮ್ಮನ್ನೂ ಸೇರಿಸಿಕೊಂಡು ಹಲಸಿನ ಹಪ್ಪಳದ ತಯಾರಿ ಶುರು. ಹಲಸಿನಕಾಯಿಯನ್ನು ಕೊಯಿದು ಅದರ ತೊಳೆ ಬಿಡಿಸಿ, ಬೇಯಿಸಿ, ಹಿಟ್ಟು ಮಾಡಿ ಹಪ್ಪಳ ಬಿಸಿಲಿನಲ್ಲಿ ಒಣಗಿಸಿ ಬೆಚ್ಚಗೆ ಇರಿಸಿದರೆ ಆ ಮಳೆಗಾಲದಲ್ಲಿ ಧೋ ಎಂದು ಸುರಿಯುವ ಮಳೆಯನ್ನು ನೋಡುತ್ತಾ ಹುರಿದ ಹಪ್ಪಳ ತಿನ್ನುವ ಸುಖ ಬೋನಸ್! ಇನ್ನು ಪುನರ್ಪುಳಿ ಹಣ್ಣಾಗುವ ಸಮಯ...

ನಿನ್ನಂತಹ ಅಮ್ಮ ನಾನಾಗಲಾರೆ

Image
                              ಸಾಮಾನ್ಯವಾಗಿ ಹುಡುಗಿಯರಿಗೆ ಅಪ್ಪ ಅಂದರೆ ಇಷ್ಟ. ಅಮ್ಮ ಅಂದರೆ  ಯಾವತ್ತೂ "ಅದು ಮಾಡಬೇಡ", "ಇದು ಮಾಡು", "ಹೀಗೆ ಇರಬೇಡ",  "ಹಾಗೆ ಇರು" ಎಂದು ಹೇಳುವ ರೂಲರ್. ಅಮ್ಮ ಅರ್ಥವಾಗಬೇಕೆಂದರೆ ನಾವೇ ಸ್ವತಃ ಅಮ್ಮನಾಗಬೇಕು.  ಇದಕ್ಕೆ ನಾನು ಕೂಡ ಹೊರತಾಗಿರಲಿಲ್ಲ. ಅಮ್ಮನ ಬಳಿ  ಜಗಳವಾಡುವಾಗಲೆಲ್ಲ ನಾನು ಹೇಳುತ್ತಿದ್ದ ಮಾತೆಂದರೆ "ನಿನ್ನಂತಹ ಅಮ್ಮ ನಾನಾಗಲಾರೆ".              ಅವಿಭಕ್ತ ಕುಟುಂಬದ ಸಣ್ಣ ಸೊಸೆಯಾಗಿ ಬಂದ ಅಮ್ಮ , ಹೆಂಡತಿಯಾಗಿ, ಸೊಸೆಯಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಿತ್ತು. ಅದರ ಜೊತೆ ಜೊತೆಗೆ ನನ್ನ ಹಾಗೂ ನನ್ನ ತಮ್ಮನ ಪಾಲನೆ. ನಾನು ಶಾಲೆಗೆ ಹೋಗುತ್ತಿದ್ದಾಗ ಶಾಲೆಯಲ್ಲಿ ಯಾವುದೇ ಸ್ಪರ್ಧೆಗಳಿರಲಿ ಅಮ್ಮ ನಮ್ಮನ್ನು ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದಳು. ಅದು ಹಾಡು ಹೇಳುವುದೇ ಆಗಿರಲಿ, ಛದ್ಮವೇಷ ಸ್ಪರ್ಧೆಯೇ ಆಗಿರಲಿ, ಚಿತ್ರ ಬಿಡಿಸುವ ಸ್ಪರ್ಧೆಯಾಗಿರಲಿ, ಕಥೆ ಹೇಳುವುದಾಗಿರಲಿ. ಸ್ಪರ್ಧೆ ಯಾವುದೇ ಇದ್ದರೂ ನಮ್ಮ ಭಾಗವಹಿಸುವಿಕೆ ಇರಲೇಬೇಕಿತ್ತು. ಹಟ್ಟಿ ಹಾಗೂ ತೋಟದ ಕೆಲಸದ ಜೊತೆ ಜೊತೆಗೇ, ಮನೆಯಲ್ಲೇ ಇರುತ್ತಿದ್ದ ವಸ್ತುಗಳನ್ನು ಉಪಯೋಗಿಸಿ ಛದ್ಮವೇಷ ಸ್ಪರ್ಧೆಗೆ ಅಮ್ಮ ನಮ್ಮನ್ನು ತಯಾರು ಮಾಡುತ...

ಓದಿನ ಸುಖ "ಪುನರ್ವಸು"

Image
ಪುಸ್ತಕದ ಹೆಸರು: ಪುನರ್ವಸು ಲೇಖಕರ ಹೆಸರು: ಡಾ. ಗಜಾನನ ಶರ್ಮ                ಪುಸ್ತಕವನ್ನು ಕೊಂಡು ಅರ್ಧ ವರ್ಷವೇ ಕಳೆದಿತ್ತು. ಪುಸ್ತಕದ ಗಾತ್ರ ನೋಡಿ ಓದಲು ಹಿಂಜರಿಯುತ್ತಿದ್ದೆ. ಆದರೆ ಯಾವಾಗ ಪುಸ್ತಕವನ್ನು ಓದಲು ಕೈಗೆತ್ತಿಕೊಂಡೆನೋ ಪುಸ್ತಕದ ವಿಷಯದ ಅಗಾಧತೆಯ ಅರಿವಾಯಿತು. ವಿಶಾಲವಾದ ಕಾನ್ವಾಸ್ ನಲ್ಲಿ ಹರಡಿದ ವಿವಿಧ ಬಣ್ಣಗಳಿಂದ ಆವೃತವಾದ ಪೈಂಟಿಂಗ್ ನಂತೆಯೇ ಭಾಸವಾಯಿತು.               ಇದು ಮುಳುಗಡೆಯ ಕಥೆಯೋ? ತಲೆಮಾರುಗಳ ನಡುವಿನ ಮಾನಸಿಕ ಅಂತರದ ಕಥೆಯೋ? ಒಂದು ಭೂ ಭಾಗದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಸ್ಥಿತ್ಯಂತರದ ಕಥೆಯೋ? ಹೌದು ಇದೆಲ್ಲವನ್ನೂ ಒಳಗೊಂಡ ಒಂದು ಕಾದಂಬರಿ. ಒಂದು ಕಾದಂಬರಿಯಲ್ಲೇ ಎಷ್ಟು ವ್ಯಕ್ತಿಗಳ ವ್ಯಕ್ತಿತ್ವದ ಚಿತ್ರಣ, ಮಾನಸಿಕ ತುಮುಲ, ತಾವು ಜೀವಿಸಿದ ಊರನ್ನು ಬಿಟ್ಟು ಹೋಗುವ ಸಂಕಟ ಎಲ್ಲವನ್ನೂ ಎಷ್ಟು ಅದ್ಭುತವಾಗಿ ಲೇಖಕರು ಹೆಣೆದಿದ್ದಾರೆ ಎಂದರೆ ಲೇಖಕರ ಕಥನ ಕೌಶಲ್ಯಕ್ಕೆ ತಲೆಬಾಗಲೇಬೇಕಾಗುತ್ತದೆ.                ೧೯೩೦ ಆಸುಪಾಸಿನಲ್ಲಿ ಸರ್.ಎಂ.ವಿ ಯವರ ಕನಸಾದ ಶರಾವತಿ ನದಿಗೆ ಅಣೆಕಟ್ಟಿನ ನಿರ್ಮಾಣ ಸ್ಥಳೀಯ ಜನರ ಸಹಕಾರದೊಂದಿಗೆ ಆರಂಭವಾಗುತ್ತದೆ. ಅದು ನಿರ್ಮಾಣಗೊಂಡ ನಾಲ್ಕೇ ವರ್ಷಗಳಲ್ಲಿ ಅದಕ್ಕಿಂತ ದೊಡ್ಡದಾದ ಲಿಂಗನಮಕ್ಕಿ...

ರೈಲಲ್ಲ ಇದು ಮಂಚ!!

Image
 ಮಗಳಿಗೆ ಎರಡೂವರೆ ವರ್ಷವಾದಾಗ, ಮಗಳನ್ನು ಕರೆದಕೊಂಡು ದೂರ ಎಲ್ಲೂ ಪ್ರವಾಸ ಹೋಗದ ನಾವು ಕೇರಳದ ಅಲೆಪ್ಪಿ ಹಾಗೂ ಮುನ್ನಾರ್ ಗೆ ಹೋಗಬೇಕೆಂದು ನಿರ್ಧರಿಸಿದೆವು. ನಾವು ಹೇಳಿದ್ದೆಲ್ಲವನ್ನು ಮಗಳು ಅರ್ಥ ಮಾಡಿಕೊಳ್ಳುತ್ತಿದ್ದರಿಂದ ವಾರದ ಮುಂಚೆಯೇ ರೈಲಿನಲ್ಲಿ ಹೋಗುವುದು ಎಂದು ನಮ್ಮ ಪ್ರವಾಸದ ಬಗ್ಗೆ ಅವಳಿಗೆ ಅರ್ಥವಾಗುವಂತೆ ವಿವರಿಸಿದ್ದೆ. ಅವಳೂ ಕೂಡ ರೈಲಿನಲ್ಲಿ ಹೋಗಲು ಉತ್ಸಾಹದಿಂದಲೇ ಇದ್ದಳು.                ಹೋಗುವ ದಿನ ಬಂದೇ ಬಿಟ್ಟಿತು. ಬ್ಯಾಗ್ ಪ್ಯಾಕಿಂಗ್ ಆದಿಯಾಗಿ ಎಲ್ಲಾ ತಯಾರಿಯೂ ಮುಗಿದಿತ್ತು. ಸಮಯಕ್ಕೆ ಸರಿಯಾಗಿ ರೈಲ್ವೇ ಸ್ಟೇಷನ್ ತಲುಪಿದೆವು. ಆದರೆ ನಮ್ಮ ರೈಲು ಮಾತ್ರ ಒಂದೂವರೆ ಘಂಟೆ ತಡವಾಗಿ ಬರುವುದೆಂದು ತಿಳಿಯಿತು. ನಮ್ಮ ದೊಡ್ಡ ಬ್ಯಾಗ್ ಗಳ ಜೊತೆ, ಅಲ್ಲಿ ಇಲ್ಲಿ ಓಡುವ ಮಗಳನ್ನು ಸಂಭಾಳಿಸುವುದೇ ನಮಗೆ ಬಹು ದೊಡ್ಡ ಕೆಲಸವಾಯಿತು. ಬೇರೆ ಕಡೆಗೆ ಹೋಗುವ ಮತ್ತು ಬರುವ ರೈಲುಗಳನ್ನು ತೋರಿಸುತ್ತಾ ಸಮಯವನ್ನು ಕಳೆದೆವು. ಬೇರೆ ರೈಲು ತೋರಿಸಿ ನಾವೂ ಕೂಡ ಅದರಲ್ಲಿ ಹೋಗೋಣ ಎಂದು ಹೇಳಲು ಶುರುಮಾಡಿದಳು. ಅಂತೂ ನಮ್ಮ ರೈಲು ಎರಡು ಘಂಟೆ ತಡವಾಗಿ ಬಂತು. ನಮ್ಮ ಭೋಗಿಯನ್ನು ಹಾಗೂ ಸೀಟ್ ಹುಡುಕಿ ಬ್ಯಾಗ್ ಗಳನ್ನು ಇಟ್ಟೆವೋ ಇಲ್ಲವೋ ಮಗಳು 'ಇದು ರೈಲಲ್ಲಾ ಮಂಚ' ಎಂದು ಒಂದೇ ಸಮನೆ ಅಳಲು ಶುರುಮಾಡಿದಳು. ರಾತ್ರಿಯ ರೈಲು ಪ್ರಯಾಣವಾದ್ದರಿಂದ ರೈಲಿನಲ್ಲಿದ್ದವರೆಲ್ಲಾ ನಿ...

ಓದಿನ ಸುಖ "ನೆನಪೇ ಸಂಗೀತ"

Image
ಪುಸ್ತಕದ ಹೆಸರು : ನೆನಪೇ ಸಂಗೀತ ಲೇಖಕರು : ವಿದ್ಯಾಭೂಷಣರು                  ೯೦ ರ ದಶಕದಲ್ಲಿ ಬಾಲ್ಯವನ್ನು ಕಳೆದ ನಮ್ಮಂತಹವರ ಬೆಳಗು ಶುರುವಾಗುತ್ತಿದ್ದುದೇ 'ಆಡಿಸಿದಳು ಯಶೋದೆ' , 'ಪಿಳ್ಳಂಗೋವಿಯ ಚೆಲುವ ಕೃಷ್ಣನ' ಮುಂತಾದ ವಿದ್ಯಾಭೂಷಣರ ಹಾಡುಗಳಿಂದ. ಈ ಹಾಡುಗಳನ್ನು ಬೇರೆ ಬೇರೆ ಹಾಡುಗಾರರು ಹಾಡಿದ್ದರೂ, ಇವತ್ತಿಗೂ ಸಹ ಈ ಹಾಡುಗಳನ್ನು ಗುನುಗುನಿಸುವಾಗ ವಿದ್ಯಾಭೂಷಣರ ಜೇನಿನ ಕಂಠವೇ ನಮ್ಮ ಮನದಲ್ಲಿ ಮೂಡುವುದು. ಅಷ್ಟು ಮಧುರವಾದ ಧ್ವನಿ ಅವರದ್ದು. ಅವರ ಧ್ವನಿಯಷ್ಟೇ ಮಧುರವಾದ, ಸುಲಲಿತ ಶೈಲಿಯಲ್ಲಿ , ಅವರು ತಮ್ಮ ಜೀವನದ ಬಗ್ಗೆ ಬರೆದ ಪುಸ್ತಕವೇ 'ನೆನಪೇ ಸಂಗೀತ'.                   ಸನ್ಯಾಸವೆನ್ನುವುದು ಭಾರತೀಯ ಸಂಸ್ಕೃತಿಯ ಪರಮೋಚ್ಚ ಸಂಗತಿ. ತ್ಯಾಗವೆಂಬ ಅತಿ ಶ್ರೇಷ್ಠ ಜೀವನ ಮೌಲ್ಯವೇ ಅದರ ಮೂಲ. ಆದರೆ ಅದು ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿಲ್ಲದೆ ಬೇರೆಯವರ ಹಿತಾಸಕ್ತಿಗೆ ಅಥವಾ ಒತ್ತಾಯಕ್ಕೆ ಕಟ್ಟುಬಿದ್ದು ಸ್ವೀಕರಿಸಿದರೆ ಸನ್ಯಾಸವೂ ಕೂಡ ಬಂಧನವೆ ಎಂದು ಈ ಪುಸ್ತಕವನ್ನು ಓದಿದಾಗ ಅನಿಸುತ್ತದೆ.                 ಪುಸ್ತಕದ ಆರಂಭದಲ್ಲಿ ವಿದ್ಯಾಭೂಷಣರು ತಮ್ಮ ಬಾಲ್ಯ ಜೀವನ, ಪೂರ್ವಾಶ್ರಮದ ಹಿರಿಯರ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ ಸವಿಸ್ತಾರವಾಗಿ ...

ಮುಗಿಲು ಬೆಳ್ಮುಗಿಲು ನಮ್ಮ ಈ ಮಗಳು

Image
ಭಾಗ 1 ಪಾದರಕ್ಷೆ ಪ್ರಿಯೆ ಈ ಪೋರಿ  ಮಗಳಿಗೆ ಸುಮಾರು ಒಂದು ವರ್ಷವಾದಾಗ ನಾವು ಅವಳಿಗೆ ಚಪ್ಪಲಿಯನ್ನು ತೆಗೆದುಕೊಟ್ಟೆವು. ಅದು ಅವಳ ಬಹುಪ್ರಿಯವಾದ ವಸ್ತುವಾಯಿತು. ಅಂಗಳದಲ್ಲಿ ಓಡಾಡಲು ಹಾಕಿದ ಚಪ್ಪಲಿಯೇ ಮನೆಯ ಅಡುಗೆ ಕೋಣೆಯಲ್ಲೂ, ದೇವರ ಕೋಣೆಯಲ್ಲೂ ಹಾಕಿ ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಖುಷಿಯಿಂದ ನಡೆಯತೊಡಗಿದಳು. ಯಾರದೇ ಮನೆಗೆ ಹೋಗಲಿ ಅವಳು ಮೊದಲು ನೋಡುತ್ತಿದ್ದದ್ದು ಅಲ್ಲಿದ್ದ ಚಪ್ಪಲಿಗಳ ಸಾಲುಗಳನ್ನು. ಯಾವುದೇ ಸಮಾರಂಭಗಳಿಗೆ ಹೋದಾಗ ಅಪರಿಚಿತರನ್ನು ನೋಡಿ ಅತ್ತಾಗ ಅವಳನ್ನು ಸಮಾಧಾನಿಸಲು ನೆರವಾಗುತ್ತಿದ್ದದ್ದು ಚಪ್ಪಲಿಗಳ ರಾಶಿಯೇ. ಇವತ್ತಿಗೂ ಮಗಳನ್ನು ಮಾಲ್ ಗಳಿಗೆ ಕರೆದುಕೊಂಡು ಹೋದರೆ ಅವಳ ಕಣ್ಣು ಬೀಳುವುದು ಚಪ್ಪಲಿ ಅಂಗಡಿಯ ಮೇಲೆ. ಅಲ್ಲಿಗೆ ಹೋದರೆ ಸುಲಭದಲ್ಲಿ ಹೊರಬರುವವಳಲ್ಲ. ಹಾಗಾಗಿ ನಾವು ಚಪ್ಪಲಿಗಳಿರುವ ಅಂಗಡಿಗಳನ್ನು ಆದಷ್ಟು ಅವಳ ಕಣ್ಣು ತಪ್ಪಿಸಿ ದಾಟಿ ಬಿಡುತ್ತೇವೆ. ಬಟ್ಟೆ ಖರೀದಿಗೆಂದು ಅಂಗಡಿಗೆ ಹೋದಾಗ ಅಳತೆ ಸರಿಯಿದೆಯೇ ಎಂದು ಪರೀಕ್ಷಿಸಲು ಹಾಕಿದ ಎಲ್ಲಾ ಬಟ್ಟೆಗಳು ಬೇಕು ಎಂದು ಹೇಳುವವಳು, ಚಪ್ಪಲಿ ಅಂಗಡಿಯಲ್ಲಿ ಮಾತ್ರ ತನಗೆ ಬೇಕಾದ್ದನ್ನು ತಾನೇ ಆರಿಸುತ್ತಾಳೆ. ಅವಳು ಆರಿಸಿದ ಚಪ್ಪಲಿ ಚೆನ್ನಾಗಿಲ್ಲವೆಂದು ನಾವು ಆಕ್ಷೇಪಿಸಿದರೆ ಅವಳು "ನನಗಿದೇ ಬೇಕು. ನನಗೆ ಇದು ಇಷ್ಟ" ಎಂದು ನಮ್ಮ ಮಾತನ್ನು ತಲೆಗೇ ಹಾಕಿಕೊಳ್ಳುವುದಿಲ್ಲ. ಫೋಟೋಶೂಟ್ ಎಂಬ ಸಂಭ್ರಮ  ಮಗಳಿಗೆ ಒಂದು ವರ್ಷವ...

ಓದಿನ ಸುಖ "ಧೃತಿಗೆಡದ ಹೆಜ್ಜೆಗಳು"

Image
                 ಅದೊಂದು ಕಾಲವಿತ್ತು. ಗಂಡು ಹೊರಗಡೆ ಹೋಗಿ ದುಡಿದರೆ ಸಾಕಿತ್ತು. ಹೆಣ್ಣು ಮನೆವಾರ್ತೆ ನೋಡಿಕೊಂಡು ಇರುತ್ತಿದ್ದಳು. ಆರ್ಥಿಕವಾಗಿ ಸಬಲರಾಗಿದ್ದ ಕುಟುಂಬಗಳಲ್ಲಿ ಕೂಡ ಹೆಣ್ಣಿಗೆ ವಿಧ್ಯಾಭ್ಯಾಸವಿರಲಿಲ್ಲ. ಕಾಲ ಸರಿದಂತೆ ಹೆಣ್ಣುಮಕ್ಕಳಿಗೂ ವಿದ್ಯಾಭ್ಯಾಸ ದೊರೆತು ಅವರೂ ಗಂಡಸರಿಗೆ ಸರಿಸಮವಾಗಿ ಹೊರಗೆ ದುಡಿದು ಆರ್ಥಿಕವಾಗಿ ಸಬಲರಾದರು. ಆದರೆ ಇಂದಿನ ಕಾಲದ ಹೆಣ್ಣುಮಕ್ಕಳು ಕೇವಲ ಶಿಕ್ಷಣವನ್ನು ಮಾತ್ರ ಪಡೆಯುವುದಲ್ಲದೇ, ಯಾರ ಕೈಕೆಳಗೂ ದುಡಿಯದೆ ತಮ್ಮದೇ ಸ್ವಂತ ಉದ್ಯಮವನ್ನು ನಡೆಸಿ, ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಕನಸು ಕಾಣುವವರು. ಅದು ಹಳ್ಳಿಯಾಗಲಿ ಇಲ್ಲವೇ ಪಟ್ಟಣವಾಗಲೀ.                "ದೃತಿಗೆಡೆದ ಹೆಜ್ಜೆಗಳು" ಪುಸ್ತಕವು ಇಂತಹ ಮಹಿಳಾ ಉದ್ಯಮಿ ಸಾಧಕರನ್ನು ಪರಿಚಯಿಸಿದೆ. ಪುಸ್ತಕವನ್ನು ಕೈಗೆತ್ತಿಕೊಂಡದ್ದಷ್ಟೇ ನೆನಪು. ಮಡಚುವಾಗ ಕೊನೆಯ ಪುಟದಲ್ಲಿದ್ದೆ. ಅಷ್ಟೊಂದು ಸರಾಗವಾಗಿ ಓದಿಸಿಕೊಂಡು ಹೋಯಿತು. ಪ್ರತೀ ಸಾಧಕಿಯ ಕಥೆಯೂ ವಿಭಿನ್ನ ಹಾಗೂ ವಿಶಿಷ್ಟ.                 'ಮನೋಬಲದ ಮುಂದೆ ಇನ್ಯಾವುದೂ ಇಲ್ಲ' ಎಂದು ಒಂಟಿಯಾಗಿ ಕೊರೋನಾ ಸಮಯದಲ್ಲಿ ಸೀರೆಯಿಂದ ಕವರ್ ಹೊಲಿದು ಮಾರಾಟ ಮಾಡಿ ಈಗ ನಾಲ್ಕು ಜನರಿಗೆ ಉದ್ಯೋಗವನ್ನು ನೀಡಿದ ಛಾಯಾ ಮಹಾಲೆ...

ಅಜ್ಜಿ ಎಂಬ ಅಕ್ಕರೆಯ ತಂತು

Image
ನಾಲ್ಕು ತಲೆಮಾರುಗಳನ್ನು ಬೆಸೆದ ಪ್ರೀತಿಯ ಕೊಂಡಿ    ಅಜ್ಜಿಯ ಪುಳ್ಳಿ  ಸಂಬಂಧಗಳೇ ಹಾಗೇ. ಬತ್ತಿದ ಎದೆಯಲ್ಲಿ ಪ್ರೀತಿಯ ಅಮೃತ ಸಿಂಚನವನ್ನು ಸುರಿಸುವ ಸ್ವಾತಿ ಹನಿಯಂತೆ. ಒಡಹುಟ್ಟಿದವರಲ್ಲಿ ಪ್ರೀತಿಯ ಜೊತೆಗೆ ಸಣ್ಣ ಮುನಿಸು ಜಗಳಗಳು ಕಾಮನ್. ತಂದೆ ತಾಯಿಗೆ ಮಕ್ಕಳ ಮೇಲೆ ಪ್ರೀತಿಯಿದ್ದರೂ ಸಹ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವ ಜವಾಬ್ದಾರಿಯೂ ಇರುತ್ತದೆ. ಆದರೆ ಅಜ್ಜಿ ಮತ್ತು ಮೊಮ್ಮಕ್ಕಳ ಮಧ್ಯೆ ಅಂತಃಕರಣ ತುಂಬಿದ ಪ್ರೀತಿ ಮತ್ತು ಪ್ರೀತಿ ಮಾತ್ರವೇ ಇರಲು ಸಾಧ್ಯ.  ನನಗೆ ಅಜ್ಜಿ ಎಂದಾಗ ನೆನಪು ಬರುವುದು ನನ್ನ ಅಮ್ಮನ ಅಮ್ಮ. ಅಪ್ಪನ ಅಮ್ಮ ಬಹಳ ಬೇಗ ತೀರಿ ಹೋಗಿದ್ದರಿಂದ ನನ್ನ ಒಡನಾಟವೆಲ್ಲ ಅಮ್ಮನ ಅಮ್ಮನಾದ ಅಜ್ಜಿಯೊಂದಿಗೆ. ನಾವು ಶಾಲೆಗೆ ರಜೆ ಸಿಕ್ಕಿದಾಗಲೆಲ್ಲ ಓಡುತ್ತಿದ್ದುದೇ ಅಜ್ಜಿ ಮನೆಗೆ. ಅಜ್ಜಿಯ ಮಡಿಲು ನಮಗೆ ಸ್ವರ್ಗ ಸುಖವನ್ನೇ ಕೊಡುತ್ತಿತ್ತು. ಎಷ್ಟೇ ಜನ ಮೊಮ್ಮಕ್ಕಳು ಬಂದಿರಲಿ ಅವರ ಬೇಕು ಬೇಡಗಳನ್ನು ನೋಡಿಕೊಂಡು ಅವರಿಗಿಷ್ಟವಾದ ತಿಂಡಿ-ತಿನಿಸುಗಳನ್ನು ಮಾಡಿಕೊಡುತ್ತಾ ನಮ್ಮ ಪಾಲಿಗೆ ಅಜ್ಜಿ ಸಾಕ್ಷಾತ್ ಅನ್ನಪೂರ್ಣೆಯಾಗಿದ್ದರು. ಬೇಸಿಗೆಯಲ್ಲಿ ಹಲಸಿನ ಹಪ್ಪಳ ತಯಾರಿಸುವ ಸಂಭ್ರಮ. ಆಗ ಅಜ್ಜಿ ನಮ್ಮೊಂದಿಗೆ ಶಿಶುಗೀತೆಗಳನ್ನು ಹಾಡಿ, ಒಗಟುಗಳನ್ನು ಬಿಡಿಸಿ, ಬಾಯಿ ಲೆಕ್ಕಗಳನ್ನು ಬಿಡಿಸಿ ನಾವು ಸದಾ ಎಂಗೇಜ್ ಆಗಿರುವಂತೆ ನೋಡಿಕೊಳ್ಳುತ್ತಿದ್ದರು. ಸದಾ ಕ್...

ಅಮ್ಮನಂತಹ ಅತ್ತೆ

Image
  ಮದುವೆಯಾಗುವ ಮೊದಲು ಏನೇ ಕೆಲಸ ಮಾಡಲೂ ಸ್ವಲ್ಪ ಸೋಮಾರಿತನ ತೋರಿದರೆ ಸಾಕು ಅಮ್ಮ ಹೇಳುತ್ತಿದ್ದದ್ದು ಒಂದೇ "ನೀನು ನಿನ್ನ ಅತ್ತೆ ಕೈಲಿ, ನಿನ್ನ ಅಮ್ಮ ನಿಂಗೆ ಇಷ್ಟೇ ಹೇಳಿಕೊಟ್ಟಿದ್ದಾ ಎಂದು ಬೈಸಿಕೊಳ್ತಿಯ ಬಿಡು" ಎಂದು. ಆಗ ನಾನು ಏನಾದರೂ ಒಂದು ಸಬೂಬು ಕೊಟ್ಟು ಅಮ್ಮನ ಬಾಯಿ ಮುಚ್ಚಿಸುತ್ತಿದ್ದೆ. ಮೊದಲಿಂದಲೂ ಅಡುಗೆ ಮಾಡುವ ಕೆಲಸವು ನನಗೆ ಸ್ವಲ್ಪ ಬೇಸರವೇ. ಅದು ಬಿಟ್ಟರೆ ಉಳಿದ ಸಾಮಾನ್ಯ ಕೆಲಸಗಳನ್ನು ನಾನು ಮಾಡುತ್ತಿದ್ದೆ. ಆದರೆ ಅಮ್ಮನ ಮಾತುಗಳನ್ನು ಸುಳ್ಳು ಮಾಡಿದ್ದು ನನ್ನ ಹಾಗೂ ನನ್ನ ಅತ್ತೆಯ ಪ್ರೀತಿಯ ಸಂಬಂಧ.  ಮೊದಲಿಂದಲೂ ಅತ್ತೆ - ಸೊಸೆ ಸಂಬಂಧಗಳ ಬಗ್ಗೆ ಆಡಿಕೊಳ್ಳುವುದನ್ನು, ಸೊಸೆಯ ಮೇಲೆ ಅತ್ತೆ ನಡೆಸುತ್ತಿದ್ದ ದರ್ಪದ ಕಥೆಗಳನ್ನು ಹಾಗೂ ಸೊಸೆ ವಯಸ್ಸಾದ ಅತ್ತೆ ಮಾವನನ್ನು ಸತಾಯಿಸುವ ಕಥೆಗಳನ್ನು ಓದಿದ್ದ ನನಗೆ ಸ್ವಲ್ಪ ಭಯ ಇತ್ತು. ಆದರೆ ಅದೆಲ್ಲಕ್ಕಿಂತಲೂ ಭಿನ್ನವಾಗಿದೆ ನನ್ನ ಹಾಗೂ ನನ್ನ ಅತ್ತೆಯ ಅನುಬಂಧ.  ಸಾಮಾನ್ಯವಾಗಿ, ಸೊಸೆ ಹೊಸತನ್ನೇನಾದರೂ ಕಲಿಯಲು ಹೊರಟರೆ ನಿರುತ್ಸಾಹಗೊಳಿಸುವವರೇ ಹೆಚ್ಚು. "ಅವಳಿಗ್ಯಾಕೆ ಇಲ್ಲದ ಉಸಾಬರಿ? ಮನೆಕೆಲಸಗಳನ್ನು ಮಾಡುತ್ತಾ ಇರಲಿ" ಎಂಬುದೇ ಈಗಲೂ ಹೆಚ್ಚಿನವರ ಅಭಿಮತ. ಆದರೆ ನನ್ನ ಅತ್ತೆ ಇದಕ್ಕೆ ತದ್ವಿರುದ್ಧ. ನಾನು ಕಾರು ಡ್ರೈವಿಂಗ್ ಕಲಿಯುತ್ತೀನೆಂದು ಹೇಳಿದಾಗ ನನ್ನ ಮಗಳಿಗೆ ೫ ತಿಂಗಳು. ಅತ್ತೆ "ನಾನು ಮಗಳನ್ನು ನೋಡಿಕೊಳ್ಳುತ್ತೇ...

ಓದಿನ ಸುಖ - ವಿಜ್ಞಾನಿಯ ಬದುಕಿನ ಮೂರು ಆಯಾಮಗಳ ಅನುಭವ ಕಥನ "ತ್ರಿಮುಖಿ"

Image
ಪುಸ್ತಕದ ಹೆಸರು: ತ್ರಿಮುಖಿ ಲೇಖಕರು: ಸಿ. ಆರ್. ಸತ್ಯ            ಶ್ರೀವತ್ಸ ಜೋಶಿಯವರು ತಮ್ಮ ಅಂಕಣದಲ್ಲಿ 'ತ್ರಿಮುಖಿ' ಪುಸ್ತಕದ ಬಗ್ಗೆ ಬರೆದಿದ್ದರು. ಅದನ್ನು ಓದಿ ಪುಸ್ತಕವನ್ನು ಓದಬೇಕೆಂದಿದ್ದೆ. ಪುಸ್ತಕ ಖರೀದಿಸಲು ನವಕರ್ನಾಟಕ ಮಳಿಗೆಗೆ ಹೋಗಿದ್ದಾಗ ಪುಸ್ತಕವನ್ನು ಕಂಡು ಖರೀದಿಸಿದ್ದೆ.             ಲೇಖಕರು ಹೇಳುವಂತೆ ಪುಸ್ತಕವು ಆತ್ಮಕಥೆಯಲ್ಲ. ಅವರ ಜೀವನಾನುಭವವನ್ನು ಮೂರು ವಿಭಾಗವಾಗಿ ವಿಂಗಡಿಸಿ ಈ ಪುಸ್ತಕವನ್ನು ಬರೆದಿದ್ದಾರೆ. ಮೊದಲನೆಯದಾಗಿ ವಿಜ್ಞಾನಿಯಾಗಿ ತಿರುವನಂತಪುರದಲ್ಲಿ ಕೆಲಸ ಮಾಡುತ್ತಾ ಹೊರನಾಡು ಕನ್ನಡಿಗನಾಗಿ ಗಳಿಸಿದ ಅನುಭವಗಳು, ಎರಡನೆಯದಾಗಿ ಪ್ರವಾಸಿಗನಾಗಿ ಹಾಗೂ ವೃತ್ತಿ ಸಂಬಂಧವಾಗಿ ವಿದೇಶಗಳಿಗೆ ಹೋದಾಗ ಉಂಟಾದ ಅನುಭವಗಳು, ಮೂರನೆಯದಾಗಿ ಮರಳಿ ಬೆಂಗಳೂರಿಗೆ ಬಂದಾಗ ವೃತ್ತಿ ಸಂಬಂಧವಾಗಿ ವಿವಿಧ ವ್ಯಕ್ತಿಗಳೊಂದಿಗೆ ಒಡನಾಡಿದ ಅನುಭವಗಳು ಹೀಗೆ ಮೂರು ವಿಭಾಗಗಳಲ್ಲಿ ಸಿ.ಆರ್.ಸತ್ಯ ಅವರು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.  ಸಿ.ಆರ್.ಸತ್ಯ ಎಂದರೆ ಯಾರು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಬಹುದು. ಇವರನ್ನು ಒಬ್ಬ ವಿಜ್ಞಾನಿ ಎಂದಷ್ಟೇ ಪರಿಚಯಿಸಿದರೆ ಬಹಳ ನೀರಸವೆನಿಸಬಹುದು. ಹಾಗಾಗಿ, ಬಹಳ ಪ್ರಸಿದ್ಧ ಛಾಯಾಚಿತ್ರವಾದ ರಾಕೆಟ್ ಮೂತಿ (ನೋಸ್ ಕೋನ್) ಯನ್ನು ಸೈಕಲ್ ಮೇಲೆ ಹೊತ್ತೊಯ್ಯುತ್ತಿರುವವರಲ್ಲಿ ಒಬ್ಬರು ...

ದರ್ಪಣ ಸುಂದರಿ

Image
         " ಏನೇ? ಇನ್ನು ಹೊರಟಾಗಿಲ್ವಾ? ಏಷ್ಟು ಹೊತ್ತು ಅಂತಾ ಅಲ್ಲೇ ಕೂತ್ಕೊಂಡು ನಿನ್ನನ್ನ ನೀನೇ ನೋಡ್ಕೊಂಡು ಇರ್ತೀಯ?" ಎಂಬ ಗಂಡನ ಮಾತಿಗೆ, ಸಮಯದ ಪರಿವೆಯಿಲ್ಲದೆ ತನ್ನನ್ನು ತಾನು ನೋಡಿಕೊಂಡು ತನ್ನ ರೂಪವನ್ನು ತಾನೇ ಮೆಚ್ಚಿಕೊಳ್ಳುವ ಹೆಂಡತಿಯನ್ನು ಬೆಚ್ಚಿಬೀಳಿಸುವಂತೆ ಮಾಡುವ ಸರದಿ ನನ್ನದು. ಇಂತಹ ಮಾತನ್ನು ಆಡುವ ಗಂಡಸರನ್ನು ಕೂಡ ಸುಲಭವಾಗಿ ನನ್ನ ಮೋಹ ಜಾಲದೊಳಗೆ ಬೀಳಿಸಿಕೊಳ್ಳುವ ತಾಕತ್ತು ನನಗಿದೆ. ಮನೆಯಲ್ಲಿ ಒಮ್ಮೆ ನನ್ನಲ್ಲಿ , ತನ್ನನ್ನು ತಾನು ನೋಡಿಕೊಂಡು ಹೊರಟ ಗಂಡಸರಿಗೆ ತಮ್ಮ ಬೈಕ್ ನಲ್ಲಿ ಇರುವ ನನ್ನನ್ನು ಮತ್ತೊಮ್ಮೆ ನೋಡದಿದ್ದರೆ ಸಮಾಧಾನವೇ ಇಲ್ಲ ನೋಡಿ. ಇಷ್ಟೆಲ್ಲಾ ಹೇಳಿದ ಮೇಲೆ ನಾನು ಯಾರೂ ಅಂತ ಗೊತ್ತಾಗಿರಬೇಕಲ್ಲ? ಹೌದು ನಿಮ್ಮ ಊಹೆ ಸರಿಯಾಗಿದೆ. ನಾನೇ "ದರ್ಪಣ ಸುಂದರಿ".    ಕಾಲೇಜ್ ಹುಡುಗಿಯರ ಆತ್ಮೀಯ ಗೆಳತಿ ನಾನು. ಅವರ ಬ್ಯಾಗ್ ನೊಳಗೆ ಸದಾ ಬೆಚ್ಚಗಿನ ವಾಸ. ಮಧ್ಯವಯಸ್ಸಿನ ಮಹಿಳೆಯರ ಜಂಭದ ಚೀಲದಲ್ಲಿ ಯಾವಾಗಲೂ ನನಗೊಂದು ಖಾಯಂ ಸ್ಥಾನ. ನಾನಿಲ್ಲದಿದ್ದರೆ ಜಂಭದ ಚೀಲಕ್ಕೆ ಜಂಭವೆಲ್ಲಿಂದ ಬಂದೀತು? ಗಂಟೆಗೊಮ್ಮೆ ನನ್ನನ್ನು ನೋಡಿಕೊಂಡು ತಮ್ಮ ಕಾಡಿಗೆ, ತುಟಿಯ ರಂಗನ್ನು ಸರಿಮಾಡಿಕೊಂಡು ಇದ್ದರೆ ನನಗೂ ಸಮಾಧಾನ. ಹಾಗಾಗಿಯೇ ನನ್ನನ್ನು ಕೈಯಲ್ಲಿ ಹಿಡಿದುಕೊಂಡ ಶಿಲಾಬಾಲಿಕೆ "ದರ್ಪಣ ಸುಂದರಿ" ಎಂದೇ ಪ್ರಸಿದ್ಧ.    ಇನ್ನು ಪುಟ್ಟ ಮಕ್ಕಳಂತೂ ...

ಓದಿನ ಸುಖ "ಪತ್ನಿಯರು ಕಂಡಂತೆ ಪ್ರಸಿದ್ಧರು"

Image
ಪುಸ್ತಕದ ಹೆಸರು: ಪತ್ನಿಯರು ಕಂಡಂತೆ ಪ್ರಸಿದ್ಧರು ಲೇಖಕರು: ಬಿ. ಎಸ್. ವೆಂಕಟಲಕ್ಷ್ಮಿ ಪ್ರಕಾಶಕರು: ಅಹರ್ನಿಶಿ ಪ್ರಕಾಶನ ಪುಸ್ತಕದ ಬೆಲೆ: 300₹                   ಸಾಧಕರ ಜೀವನ ಯಾವಾಗಲೂ ಕಷ್ಟದ ಹಾದಿ. ಅದು ಕೇವಲ ಆ ವ್ಯಕ್ತಿಯೊಬ್ಬನ ಪರಿಶ್ರಮ ಹಾಗೂ ತ್ಯಾಗವನ್ನು ಬೇಡದೇ ಹಲವಾರು ಜನರ ತ್ಯಾಗದ ಫಲ. ಒಮ್ಮೆ ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದನೋ ಆಗ ಅಂತಹ ವ್ಯಕ್ತಿತ್ವದ ಬಗ್ಗೆ ಎಲ್ಲರಿಗೂ ಕುತೂಹಲ ಸಹಜ. ಅಂತಹ ನಮ್ಮ ಮನುಷ್ಯ ಸಹಜವಾದ ಕುತೂಹಲವನ್ನು ಮಾತ್ರ ತಣಿಸದೇ ಅವರ ಕಷ್ಟದ ಹಾದಿಯನ್ನ ಸವೆಸಲು ಅವರ ಜೊತೆ ನಡೆದ ಅವರ ಪತ್ನಿಯರ ಅನುಭವಗಳ ಗುಚ್ಛವೇ 'ಪತ್ನಿಯರು ಕಂಡಂತೆ ಪ್ರಸಿದ್ಧರು' ಪುಸ್ತಕ. ಈ ಪುಸ್ತಕದಲ್ಲಿ ಒಟ್ಟು 40 ವಿವಿಧ ಕ್ಷೇತ್ರಗಳ ಸಾಧಕರ ಪತ್ನಿಯರನ್ನು ಲೇಖಕಿಯು ಸಂದರ್ಶಿಸಿದ್ದಾರೆ. ಇವರೆಲ್ಲರೂ ತಮ್ಮ ಪತಿಯ ಸಾಧನೆಗೆ ಬೆನ್ನೆಲುಬಾಗಿ ನಿಂತವರು. ಇಲ್ಲಿ ತಮ್ಮ ಮನದ ಮಾತನ್ನು ,ತಮ್ಮ ಕೌಟುಂಬಿಕ ಜೀವನದ ಸುಖ ದುಃಖಗಳನ್ನು ಹೇಳಿದ್ದಾರೆ.                  ಪ್ರಸಿದ್ಧ ವೀಣಾ ವಾದಕರಾದ ದೊರೆಸ್ವಾಮಿ ಅಯ್ಯಂಗಾರರ ಪತ್ನಿ ಶಾರದಮ್ಮನವರು ತಮ್ಮ ಪತಿಯ ಸರಳ ಶುದ್ಧ ಮನಸ್ಸಿನ ಬಗ್ಗೆ ಹೇಳಿದ್ದಾರೆ. ವರ್ಣಮಯ ಬದುಕಿನ ದುಃಖ, ಬೇಗುದಿ, ಆತಂಕದ ಜೊತೆ ಜೊತೆಗೆ ನಾಟಕ ಕಂಪೆನಿಗಳ ಹಾಗೂ ಸಿನಿಮಾ...

ಅಪ್ಪನೆಂದರೆ.....

Image
                 ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನ ಪ್ರೀತಿಯ ಅಪ್ಪುಗೆ, ಮಾರ್ಗದರ್ಶನ ಜೀವನದಲ್ಲಿ ಮುನ್ನಡೆಯಲು ಧೈರ್ಯವನ್ನು ಕೊಡುವ ಸಾಧನ.                  ನನಗೆ ನನ್ನ ಅಪ್ಪನೆ ರೋಲ್ ಮಾಡೆಲ್. ಯಾವುದೇ ಕೆಲಸ ಮಾಡೋ ಮುಂಚೆ 'ನಾನಿದ್ದೇನೆ ಹೆದರಬೇಡ' ಅನ್ನೋ ಅಪ್ಪನ ಮಾತು ಎಷ್ಟೇ ಕಷ್ಟವಾದ ಕೆಲಸವನ್ನು ಮಾಡಲು ಧೈರ್ಯವನ್ನು ಕೊಡುತ್ತಿತ್ತು.                ಚಿಕ್ಕವಳಿದ್ದಾಗ ಚಿತ್ರಕ್ಕೆ ಬಣ್ಣ ತುಂಬುವುದರಿಂದ ಹಿಡಿದು ನನ್ನ ಬಟ್ಟೆ ಸೆಲೆಕ್ಷನ್ ವರೆಗೆ ಅಪ್ಪ ಇರಬೇಕಿತ್ತು. ಹಾಗಂತ ಯಾವತ್ತೂ ಅಪ್ಪ ತಮ್ಮ ಅಭಿಪ್ರಾಯವನ್ನು ನಮ್ಮ ಮೇಲೆ ಹೇರುತ್ತಿರಲಿಲ್ಲ. ನನ್ನ ಜೀವನದ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಬಾಲ್ಯದಲ್ಲಿ ಮಾರ್ಗದರ್ಶಕನಾಗಿದ್ದ ಅಪ್ಪ, ಕಾಲೇಜಿಗೆ ಹೋಗುವಾಗ ಬೆಸ್ಟ್ ಫ್ರೆಂಡ್.                 ಓದಿದ ಪುಸ್ತಕ, ನೋಡಿದ ಸಿನಿಮಾ ಎಲ್ಲದರ ಬಗ್ಗೆಯೂ ಅಪ್ಪನ ಜೊತೆ ಹಂಚಿಕೊಳ್ಳುತ್ತೇನೆ. ಎಂತಹ ಸಂದಿಗ್ಧ ಸಮಯದಲ್ಲಿಯೂ ಅಪ್ಪನ ಬಳಿ ಮಾತನಾಡಿದರೆ ಮನಸ್ಸಿಗೆ ಸಮಾಧಾನ.                ನಾನಾಗ ಡಿಗ್ರಿಯಲ್ಲಿದ್ದೆ. ...

ಬಸ್ಸಾಯಣ

Image
 ಜೀವನ ಪಯಣವು ಹಲವು ಅನುಭವಗಳ ಆಗರ. ಅಂತಹ ಅನುಭವಗಳಲ್ಲಿ ಬಸ್ ಪ್ರಯಾಣದ ಅನುಭವಗಳು ಸಹ ಒಂದು. ಟಿವಿಯಲ್ಲಿ ಮಗಳು "wheels on the bus go round and round" ಎಂದು ನೋಡುತ್ತಿದ್ದಾಗ ನನಗೆ ನನ್ನ ಜೀವನದ ಬಸ್ ಅನುಭವಗಳು ಮನಸ್ಸಿನಲ್ಲಿ ಹಾದು ಹೋದವು.  ಬಾಲ್ಯದಲ್ಲಿ ಬಸ್ಸಿನ ಪ್ರಯಾಣವೆಂದರೆ ಖುಷಿಯೋ ಖುಷಿ. ಏಕೆಂದರೆ ಬಸ್ಸಿನಲ್ಲಿ ಹೋಗಲು ಸಿಗುತ್ತಿದ್ದದ್ದೇ ಅಪರೂಪ. ಪ್ರತಿದಿನ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದ ನಾವು ರಜಾ ಕಾಲದಲ್ಲಿ ಅಜ್ಜಿಯ ಮನೆಗೋ, ನೆಂಟರ ಮನೆಗೋ ಹೋಗುವಾಗ ಬಸ್ಸಿನಲ್ಲಿ ಹೋಗುತ್ತಿದ್ದವು. ಹಿಂದೆ ಹಿಂದೆ ಓಡುತ್ತಿದ್ದ ಮರಗಳನ್ನು ಕಣ್ಣು ಮಿಟುಕಿಸದೆ ನೋಡುತ್ತಾ , ನಗರಪ್ರದೇಶಗಳು ಬಂದಾಗ ಅಂಗಡಿಗಳ ಎದುರಿನ ಬೋರ್ಡುಗಳನ್ನು ಓದುತ್ತಾ ಹೋಗುವುದೇ ಅತ್ಯಂತ ಖುಷಿ ಕೊಡುವ ಸಂಗತಿಯಾಗಿತ್ತು. ಮನೆಗೆ ಬಂದ ಮೇಲೆ ಸಂಗ್ರಹಿಸಿದ ಟಿಕೆಟ್ ಗಳೊಂದಿಗೆ ನಮ್ಮ ಬಸ್ ಆಟ ಶುರುವಾಗುತ್ತಿತ್ತು. ಮನೆಯ ತಾರಸಿಯ ಮೆಟ್ಟಿಲುಗಳೇ ನಮ್ಮ ಬಸ್. ಯಾರು ಅತೀ ಹೆಚ್ಚು ಬಸ್ಸಿನ ಟಿಕೆಟ್ ಗಳನ್ನು ಸಂಗ್ರಹಿಸುತ್ತಾರೋ ಅವರಿಗೆ ಕಂಡಕ್ಟರ್ ಆಗುವ ಅವಕಾಶ. ಹಾಗಾಗಿ ಬಸ್ ಟಿಕೆಟ್ ಸಂಗ್ರಹಿಸಲು ಸಹ ನಮ್ಮಲ್ಲಿ ಪೈಪೋಟಿ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ನನ್ನ ತಮ್ಮನಿಗೆ ದೊಡ್ಡವನಾದ ಮೇಲೆ ಬಸ್ ಡ್ರೈವರ್ ಆಗಬೇಕೆಂಬ ಆಸೆಯೂ ಇತ್ತು.  ಬಾಲ್ಯದಲ್ಲಿ ಸದಾ ಮನಸ್ಸಿಗೆ ಮುದವನ್ನು ಕೊಡುತ್ತಿದ್ದ ಬಸ್ ಪ್ರಯಾಣ ಕಾಲೇಜ್ ಗೆ ಬರುವಷ್ಟರ...

ಎಲ್ಲಿಗೋ ಹೊರಟವರು ಇನ್ನೆಲ್ಲಿಗೋ ತಲುಪಿದೆವು

Image
 "ದೀಪಾವಳಿಗೆ ಊರಿಗೆ ಬರುತ್ತಿದ್ದೇನೆ. ಹೇಗೂ ರಜಾ ಇದೆ. ಅಣ್ಣನಿಗೆ ಬಿಡುವಿದ್ದರೆ ಚಿಕ್ಕಮಗಳೂರಿಗೆ ಹೋಗೋಣ" ಎಂದು ಮೈದುನ ಫೋನ್ ಮಾಡಿದಾಗ "ಸರಿ" ಎಂದೇನೋ ಒಪ್ಪಿಗೆ ಕೊಟ್ಟಿದ್ದೆವು. ಆದರೆ ತಿಂಗಳಿನಿಂದ ಮಗಳಿಗೂ ಸೇರಿ ನಮ್ಮೆಲ್ಲರಿಗೂ ಕಾಡುತ್ತಿರುವ ಶೀತ, ಕಫ, ಕೆಮ್ಮು, ಜ್ವರವು ನಮ್ಮನ್ನು ಚಿಕ್ಕಮಗಳೂರಿಗೆ ಹೋಗಲು ಹಿಂದೇಟು ಹಾಕುವಂತೆ ಮಾಡುತ್ತಿತ್ತು. ಅಷ್ಟರಲ್ಲೇ ನನ್ನ ತಮ್ಮನೂ ಊರಿಗೆ ಬರುವವನಿದ್ದ ಕಾರಣ ಅವನಿಗೆ ನಮ್ಮ ಪ್ಲಾನ್ ತಿಳಿಸಿ "ನೀನೂ ನಮ್ಮ ಮನೆಗೇ ಬಾ. ಒಟ್ಟಿಗೆ ಚಿಕ್ಕಮಗಳೂರಿಗೆ ಹೋಗಬಹುದು" ಎಂದು ಹೇಳಿದೆ. ಅವನೂ "ಸರಿ" ಎಂದು ಒಪ್ಪಿದ್ದ. ಉಳಿದ ಸಹೋದರರು ಜೊತೆ ಸೇರಿ ಒಟ್ಟಿಗೇ ಹೋಗೋಣ ಎಂದು ನಿರ್ಧರಿಸಿದ್ದೆವು. ಇಷ್ಟೆಲ್ಲ ಯೋಜನೆ ಮಾಡಿ ವಾರ ಕಳೆದಿದ್ದರೂ ನಮ್ಮ ಶೀತ ಕಫ ಕಮ್ಮಿಯಾಗುವ ಲಕ್ಷಣವೇ ಕಾಣುತ್ತಿಲ್ಲ. ಹಾಗಾಗಿ ಹೋಗುವುದೇ ಬೇಡವೇ ಎಂಬ ದ್ವಂದ್ವದಲ್ಲೇ ಊರನ್ನು ತಲುಪಿದವು.  ಚಿಕ್ಕಮಗಳೂರಿಗೆ ಹೋಗುವುದೆಂದು ನಿರ್ಧರಿಸಿದ್ದರೂ ಯಾವ ಸ್ಥಳಕ್ಕೆ ಹೋಗೋದು ಎಂದು ಇನ್ನು ತೀರ್ಮಾನಿಸಿರಲಿಲ್ಲ. ಹಾಗಾಗಿ ರಾತ್ರಿಯ ಊಟದ ನಂತರ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಒಂದು ಸಣ್ಣ ಸಭೆ ಸೇರಿದೆವು😀 "ನೀಲ ಕುರುಂಜಿಯನ್ನು ನೋಡಲು ಹೋಗೋಣ" ಎಂದು ಒಬ್ಬರು ಹೇಳಿದಾಗ, ಇನ್ನೊಬ್ಬರು "ಬೆಟ್ಟವನ್ನು ಏರಬೇಕೆಂದರೆ ಕನಿಷ್ಠ ಮೂರು ಕಿಲೋಮೀಟರ್ ನಡೆಯಬೇಕು...

ಮುಗಿಲು ಬೆಳ್ಮುಗಿಲು ನಮ್ಮ ಈ ಮಗಳು

Image
          ಹೊರಗೆ ಧೋ ಎಂದು ಸುರಿಯುತ್ತಿರುವ ಎಂದೂ ಇರದಿದ್ದ ಮಳೆ. ಹೊಟ್ಟೆ ಒಳಗೆ ಅಸಾಧ್ಯವಾದ ನೋವು. ಆತಂಕಗೊಂಡ ನಮ್ಮ ಮುಖಗಳು. ಆಸ್ಪತ್ರೆಗೆ ದೌಡಾಯಿಸಿರುವ ನಾವು . ಹೌದು ನಿಮ್ಮ ಊಹೆ ಸರಿಯಾಗಿದೆ. ನಾವು ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಸ್ಪತ್ರೆಯನ್ನು ಸೇರಿದ್ದೆವು. ಡಾಕ್ಟರ್ ನನ್ನನ್ನು ಪರೀಕ್ಷಿಸಿ ಎಲ್ಲವೂ ಸರಿಯಿದೆ. ಸಹಜವಾಗಿ ಮಗು ಜನಿಸಬಹುದು ಎಂಬ ಭರವಸೆಯನ್ನು ನೀಡಿದರು. ನೋವು ಗಂಟೆಗೊಮ್ಮೆ ಹೆಚ್ಚಾಗುತ್ತಾ ಹೋಯಿತು. ಮತ್ತೊಮ್ಮೆ ಪರೀಕ್ಷಿಸಿದ ಡಾಕ್ಟರ್ ನೋವಿನ ತೀವ್ರತೆ ಅಷ್ಟೇನು ಹೆಚ್ಚಿಲ್ಲ. ಇವತ್ತು ಡೆಲಿವರಿ ಆಗಲಿಕ್ಕಿಲ್ಲ ಎಂದು ಹೇಳಿ ಆಗಲೇ ರಾತ್ರಿಯಾಗಿದ್ದರಿಂದ ತಮ್ಮ ಮನೆಗೆ ಹೋದರು. ಕ್ಷಣ ಕ್ಷಣಕ್ಕೂ ನೋವು ಹೆಚ್ಚುತ್ತಿದೆ. ಮಲಗಲು ಆಗುತ್ತಿಲ್ಲ, ಕೂರಲೂ ಆಗುತ್ತಿಲ್ಲ. ಆಸಾಧ್ಯವಾದ ನೋವು. ನಡುರಾತ್ರಿಯಲ್ಲಿ ಡಾಕ್ಟರ್ ಓಡಿ ಬಂದರು. ಅಂತೂ ಸತತ ನೋವಿನ ನಂತರ ಡಾಕ್ಟರ್ ನ ನಿರೀಕ್ಷೆಯನ್ನು ಸುಳ್ಳು ಮಾಡಿ ಅದೇ ದಿನ ಮಗಳು ಜಗತ್ತಿಗೆ ಕಾಲಿಟ್ಟಳು. ಸದಾ ಮನೆ,ಆಫೀಸ್, ತಿರುಗಾಟ ಎಂಬ ನಮ್ಮದೇ ಪ್ರಪಂಚದಲ್ಲಿದ್ದ ನಮಗೆ ಈಗಷ್ಟೇ ಜಗತ್ತಿಗೆ ಬಂದ ಪುಟ್ಟ ಮಗಳಿನ ಹೊಸ ಜಗತ್ತು ಇಷ್ಟಿಷ್ಟೇ ತೆರೆದುಕೊಳ್ಳತೊಡಗಿತು. ಲಕ್ಷ್ಮಿ ಬಂದಳು    ಮಗಳು ಹುಟ್ಟಿದ ಮರುದಿನ ಬೆಳಿಗ್ಗೆ ಬಂದ ಮಕ್ಕಳ ಡಾಕ್ಟರ್ ಅವಳನ್ನು ಎಲ್ಲಾ ಬಗೆಯಲ್ಲೂ ಪರೀಕ್ಷಿಸಿದರು. ನಂತರ "ಲಕ್ಷ್ಮಿ ಬಂದಿದ್ದಾಳೆ...